ಕೆನಡಾದ ಟೊರೆಂಟೋದಲ್ಲಿ ತಮಿಳುನಾಡು ವಿದ್ಯಾರ್ಥಿಗೆ ಚಾಕು ಇರಿತ: ಆಘಾತ ವ್ಯಕ್ತಪಡಿಸಿದ ಎಂಇಎ

 ಕೆನಡಾದ ಟೊರೆಂಟೋದಲ್ಲಿ ತಮಿಳುನಾಡಿನ ರಾಚೆಲ್ ಅಲ್ಬರ್ಟ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್  ಆಘಾತ ವ್ಯಕ್ತಪಡಿಸಿದ್ದಾರೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್
ವಿದೇಶಾಂಗ ಸಚಿವ ಎಸ್. ಜೈಶಂಕರ್
Updated on

ನವ ದೆಹಲಿ:  ಕೆನಡಾದ ಟೊರೆಂಟೋದಲ್ಲಿ ತಮಿಳುನಾಡಿನ ರಾಚೆಲ್ ಅಲ್ಬರ್ಟ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದು, ವಿದೇಶಾಂಗ ಸಚಿವ ಎಸ್. ಜೈ ಶಂಕರ್  ಆಘಾತ ವ್ಯಕ್ತಪಡಿಸಿದ್ದಾರೆ.

ಟೊರೆಂಟೋದಲ್ಲಿನ ಭಾರತೀಯ ವಿದ್ಯಾರ್ಥಿ ರಾಚೆಲ್ ಅಲ್ಬರ್ಟ್ ಮೇಲಿನ ದಾಳಿ ದಿಗ್ಬ್ರಮೆ ಮೂಡಿಸಿದೆ. ಆ ವಿದ್ಯಾರ್ಥಿಯ ಕುಟುಂಬಸ್ಥರಿಗೆ ಸಹಾಯ ಮಾಡಲು ವಿದೇಶಾಂಗ ವ್ಯವಹಾರಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕುಟುಂಬ ಸದಸ್ಯರು ಕೂಡಲೇ 919873983884 ಸಂಪರ್ಕಿಸುವಂತೆ ರಾಚೆಲ್ ಸಂಬಂಧಿ ಎಂದು ಪರಿಚಯಿಸಿಕೊಂಡಿರುವ ರೊನಾಲ್ಡ್ ಅವರಿಗೆ ಟ್ವೀಟ್ ಗೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮುನ್ನ , ತಮಿಳುನಾಡಿನಿಂದ ಕೆನಡಾಕ್ಕೆ ಹೋಗಿದ್ದ ನನ್ನ ಸಂಬಂಧಿ ರಾಚೆಲ್ ಚಾಕು ಇರಿತದಿಂದ ಆಸ್ಪತ್ರೆ ಸೇರಿದ್ದಾರೆ. ಆಕೆಯ ಕುಟುಂಬಸ್ಥರು ತಮಿಳುನಾಡಿನ ಕೂನೂರಿನಲ್ಲಿದ್ದು, ದಯವಿಟ್ಟು ಆಕೆಗೆ ಸಹಾಯ ಮಾಡಿ ಎಂದು ರೋನಾಲ್ಡ್ ಟ್ವೀಟ್ ಮಾಡಿದ್ದರು. 

ಈ ಘಟನೆ ಸಂಬಂಧ ಸ್ಥಳೀಯ ಮಾಧ್ಯಮಗಳ ವರದಿಯನ್ನು ಟ್ವೀಟ್ ನಲ್ಲಿ ಹಾಕಿ ಪೋನ್ ನಂಬರ್ ನ್ನು ರೋನಾಲ್ಡ್ ಉಲ್ಲೇಖಿಸಿದ್ದರು. 23 ವರ್ಷದ ರಾಚೆಲ್ ಬುಧವಾರ ರಾತ್ರಿ ಚಾಕು ಇರಿತಕ್ಕೊಳಗಾಗಿರುವ ಬಗ್ಗೆ ವರದಿಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com