ಬಿಜೆಪಿಗೆ ಶಾಕ್: ಹಿರಿಯ ನಾಯಕ, ಮಾಜಿ ಸಚಿವ ಹರ್ಶರಣ್ ಸಿಂಗ್ ಬಲ್ಲಿ ಆಪ್ ಸೇರ್ಪಡೆ

ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹರ್ಶರಣ್ ಸಿಂಗ್ ಬಲ್ಲಿ ಅವರು ಶನಿವಾರ ಆಮ್ ಆದ್ಮಿ ಪಕ್ಷ(ಎಎಪಿ) ಸೇರುವ ಮೂಲಕ ಕೇಸರಿ ಪಕ್ಷಕ್ಕೆ ಶಾಕ್ ನೀಡಿದ್ದಾರೆ.
ಹರ್ಶರಣ್ ಸಿಂಗ್ ಬಲ್ಲಿ ಆಪ್ ಸೇರ್ಪಡೆ
ಹರ್ಶರಣ್ ಸಿಂಗ್ ಬಲ್ಲಿ ಆಪ್ ಸೇರ್ಪಡೆ
Updated on

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹರ್ಶರಣ್ ಸಿಂಗ್ ಬಲ್ಲಿ ಅವರು ಶನಿವಾರ ಆಮ್ ಆದ್ಮಿ ಪಕ್ಷ(ಎಎಪಿ) ಸೇರುವ ಮೂಲಕ ಕೇಸರಿ ಪಕ್ಷಕ್ಕೆ ಶಾಕ್ ನೀಡಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿರುವ ಹರ್ಶರಣ್ ಸಿಂಗ್ ಅವರ ಸೇರ್ಪಡೆಯಿಂದ ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ.

ಹರಿನಗರ ವಿಧಾಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಲ್ಲಿ ಅವರು ಈ ಹಿಂದೆ ಮದನ್ ಲಾಲ್ ಖುರಾನ ನೇತೃತ್ವದ ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದರು.

ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನೇತೃತ್ವದಲ್ಲಿ ಬಲ್ಲಿ ಅವರು ಆಪ್ ಸೇರ್ಪಡೆಯಾಗಿದ್ದಾರೆ.

ಆಪ್ ಸೇರಿದ ಬಳಿಕ ಮಾತನಾಡಿದ ಬಲ್ಲಿ, ಕೇಜ್ರಿವಾಲ್ ಅವರು ತಾಯಿಯಂತೆ ದೆಹಲಿಯ ಸೇವೆ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಇತರೆ ಕ್ಷೇತ್ರಗಳಲ್ಲಿ ಕೇಜ್ರಿವಾಲ್ ಅವರು ಮಾಡಿದ ಸುಧಾರಣೆಯಿಂದ ಪ್ರೇರಿತನಾಗಿ ನಾನು ಆಮ್ ಆದ್ಮಿ ಪಕ್ಷ ಸೇರಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com