ತೆರಿಗೆ ವಂಚನೆ ಪ್ರಕರಣ: ಕಾರ್ತಿ ಚಿದಂಬರಂ ಗೆ ತಾತ್ಕಾಲಿಕ ರಿಲೀಫ್

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧದ ದೋಷಾರೋಪಣೆ ತಯಾರಿಸುವ ಪ್ರಕ್ರಿಯೆಗೆ ನೀಡಿರುವ ತಡೆಯಾಜ್ಞೆಯನ್ನು ಮದ್ರಾಸ್ ಹೈಕೋರ್ಟ್ ಫೆ. 12ರವರೆಗೆ ವಿಸ್ತರಿಸಿದೆ. 
ತೆರಿಗೆ ವಂಚನೆಪ್ರಕರಣ: ಕಾರ್ತಿ ಚಿದಂಬರಂ ಗೆ ತಾತ್ಕಾಲಿಕ ರಿಲೀಫ್
ತೆರಿಗೆ ವಂಚನೆಪ್ರಕರಣ: ಕಾರ್ತಿ ಚಿದಂಬರಂ ಗೆ ತಾತ್ಕಾಲಿಕ ರಿಲೀಫ್
Updated on

ಚೆನ್ನೈ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರ ವಿರುದ್ಧದ ದೋಷಾರೋಪಣೆ ತಯಾರಿಸುವ ಪ್ರಕ್ರಿಯೆಗೆ ನೀಡಿರುವ ತಡೆಯಾಜ್ಞೆಯನ್ನು ಮದ್ರಾಸ್ ಹೈಕೋರ್ಟ್ ಫೆ. 12ರವರೆಗೆ ವಿಸ್ತರಿಸಿದೆ. 

ತಮ್ಮ ವಿರುದ್ಧ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಕಾರ್ತಿ ಚಿದಂಬರಂ  ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

ಈ ಹಿಂದೆ ವಿಶೇಷ ನ್ಯಾಯಾಲಯ ಕಾರ್ತಿ ಚಿದಂಬರಂ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಚೆಸ್ ಗ್ಲೋಬಲ್ ಅಡ್ಬೈಸರಿ ಸರ್ವಿಸಸ್ ನಲ್ಲಿ ಜಪ್ತಿ ಮಾಡಿರುವ ಹಾರ್ಡ್ ಡ್ರೈವ್ ಗಳನ್ನು ಸಾಕ್ಷಿಯನ್ನು ಪರಿಗಣಿಸಲಾಗದು ಎಂಬ ಮನವಿಯನ್ನು ಕೂಡ ನ್ಯಾಯಾಲಯ ತಿರಸ್ಕರಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com