'ಅಪ್ರತಿಮ ಗ್ರಾಮ'ವಾಗಿ ಕಂಗೊಳಿಸಲಿದೆ ಭಾರತ-ಚೀನಾ ಗಡಿಯ ಉತ್ತರಾಖಂಡ್ ನ ಕೊನೆಯ ಗ್ರಾಮ 'ಮನ'
ಡೆಹ್ರಾಡೂನ್: ಉತ್ತರಾಖಂಡ್ ನ ಕೊನೆಯ ಮತ್ತು ಚಮೊಲಿ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿರುವ ಮನ ಎಂಬ ಗ್ರಾಮ ಬದರಿನಾಥದಲ್ಲಿ ಖ್ಯಾತ ಪ್ರವಾಸಿ ಸ್ಥಳ. ಈ ಗ್ರಾಮವನ್ನು ಸಾಂಪ್ರದಾಯಿಕ ವಿಶೇಷ ಹೆಗ್ಗುರುತಿನ ಸ್ಥಳವನ್ನಾಗಿ ಅಭಿವೃದ್ದಿಪಡಿಸಲು ಸರ್ಕಾರ ಮುಂದಾಗಿದೆ.
ಈ ಕಾರ್ಯಕ್ಕೆ ಈಗಾಗಲೇ 7 ಕೋಟಿ ರೂಪಾಯಿ ಮಂಜೂರು ಮಾಡಲಾಗಿದ್ದು ಪ್ರತಿವರ್ಷವೂ ಸಾವಿರಾರು ಜನರನ್ನು ಆಕರ್ಷಿಸುವ ಈ ಗ್ರಾಮವನ್ನು ಇನ್ನಷ್ಟು ವಿಶೇಷವಾಗಿ ಕಾಣುವಂತೆ ಅಭಿವೃದ್ಧಿಪಡಿಸಲಾಗುವುದು ಎಂದು ಚಮೊಲಿ ಜಿಲ್ಲೆಯ ಮುಖ್ಯ ಅಭಿವೃದ್ಧಿ ಅಧಿಕಾರಿ ಹಂಸದತ್ ಪಾಂಡೆ ತಿಳಿಸಿದ್ದಾರೆ.
ಸಮುದ್ರ ಮಟ್ಟದಿಂದ 10 ಸಾವಿರದ 500 ಅಡಿ ಎತ್ತರದಲ್ಲಿರುವ ಈ ಗ್ರಾಮ ಭಾರತ-ಚೀನಾ ಗಡಿಯಲ್ಲಿ ಸುಮಾರು 24 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ.ಸಾಂಪ್ರದಾಯಿಕ ಪರ್ವತ ವಾಸ್ತುಶಿಲ್ಪದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.ಹಳೆಯ ಕಾಲದ ರಸ್ತೆಗಳು, ಸಭಾಂಗಣ, ಪ್ರವೇಶ ದ್ವಾರದಂತಹ ನಿರ್ಮಾಣ ಯೋಜನೆಗಳನ್ನು ಒಳಗೊಂಡಿರುತ್ತದೆ.
ಪ್ರವಾಸಿಗರಿಗೆ ಇಲ್ಲಿ ಪ್ರಯಾಣಕ್ಕೆ ಅನುಕೂಲವಾಗಲು ಇ-ರಿಕ್ಷಾಗಳು ಅಥವಾ ಹಗುರ ಪರಿಸರಸ್ನೇಹಿ ವಾಹನಗಳನ್ನು ಏರ್ಪಡಿಸಲಾಗುತ್ತದೆ. ಇಲ್ಲಿ ಭದ್ರತೆ ಮತ್ತು ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಪ್ರವಾಸಿಗರ ವಾಹನಗಳನ್ನು ಒಳಗೆ ಬಿಡುವುದಿಲ್ಲ. ಈ ಗ್ರಾಮ ಈಗಾಗಲೇ ಸಾಕಷ್ಟು ಪ್ರಸಿದ್ಧಿಯಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದರೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು. ಆರ್ಥಿಕತೆ ವೃದ್ಧಿಗೂ ಅನುಕೂಲವಾಗುತ್ತದೆ ಎಂದು ಗ್ರಾಮದ ನಿವಾಸಿ ಭಗವತ್ ಮೆಹ್ತಾ ಹೇಳುತ್ತಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ