ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ 18 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲು: ನ್ಯಾಯಮೂರ್ತಿ ಚಂದ್ರಚೂಡ್

ಲಾಕ್ ಡೌನ್ ಸಮಯದಲ್ಲಿ ದೇಶದಲ್ಲಿ 18 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲು: ನ್ಯಾಯಮೂರ್ತಿ ಚಂದ್ರಚೂಡ್

 ಮಾರ್ಚ್ ಮತ್ತು ಜುಲೈ ನಡುವಿನ ಕರೋನಾವೈರಸ್  ಪ್ರೇರಿತ ಲಾಕ್ ಡೌನ್ ಸಮಯದಲ್ಲಿ ಭಾರತದ ನ್ಯಾಯಾಲಯಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ

ನಾಸಿಕ್: ಮಾರ್ಚ್ ಮತ್ತು ಜುಲೈ ನಡುವಿನ ಕರೋನಾವೈರಸ್  ಪ್ರೇರಿತ ಲಾಕ್ ಡೌನ್ ಸಮಯದಲ್ಲಿ ಭಾರತದ ನ್ಯಾಯಾಲಯಗಳಲ್ಲಿ 18 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಶನಿವಾರ ಹೇಳಿದ್ದಾರೆ.

"ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ಸ್ಥಾಪಿತವಾದ ವರ್ಚುವಲ್ ನ್ಯಾಯಾಲಯಗಳು ಹೆಚ್ಚು ದಿನ ಉಳಿಯುವುದಿಲ್ಲ ಹಾಗೂ ಸಾಮಾನ್ಯ ನ್ಯಾಯಾಲಯಗಳು ಕ್ರಮೇಣ ಮತ್ತೊಮ್ಮೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದರು

ನಾಸಿಕ್‌ನಲ್ಲಿ ನಡೆದ ದೇಶದ ಮೊದಲ ಇ-ಗವರ್ನೆನ್ಸ್  ಕೇಂದ್ರದ ವರ್ಚುವಲ್ ಉದ್ಘಾಟನಾ  ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು"ಮಾರ್ಚ್ 24 ಮತ್ತು ಜುಲೈ 24 ರ ನಡುವೆ ಲಾಕ್ ಡೌನ್ ಸಮಯದಲ್ಲಿ ದೇಶಾದ್ಯಂತ 18,03,327 ಪ್ರಕರಣಗಳು ದಾಖಲಾಗಿವೆ, ಅದರಲ್ಲಿ 7,90,112 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ" ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

"ಈ ಅವಧಿಯಲ್ಲಿ, ಮಹಾರಾಷ್ಟ್ರದ ಜಿಲ್ಲಾ ನ್ಯಾಯಾಲಯಗಳು 2,22,431 ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ 61,986 ಪ್ರಕರಣಗಳು ಇತ್ಯರ್ಥವಾಗಿದೆ. " ಎಂದು ಅವರು ಹೇಳಿದರು. ರ, ಈ ಬಿಕ್ಕಟ್ಟಿನ ಅವಧಿಯಲ್ಲಿಯೂ ಸಹ ವರ್ಚುವಲ್ ನ್ಯಾಯಾಲಯಗಳು ನ್ಯಾಯದ ವಿಳಂಬವಾಗುವುದನ್ನು ತಡೆದಿದೆ. 

ಆದಾಗ್ಯೂ, ನ್ಯಾಯಮೂರ್ತಿ ಚಂದ್ರಚೂಡ್ ವರ್ಚುವಲ್  ನ್ಯಾಯಾಲಯಗಳು ನಿಯಮಿತವಾಗಿದೆ. "ಬಿಕ್ಕಟ್ಟಿನ ಅವಧಿಯಲ್ಲಿ ನ್ಯಾಯ ನೀಡುವಿಕೆ ವಿಳಂಬವಾಗುವುದನ್ನು ತಡೆಯಲು ವರ್ಚುವಲ್ ನ್ಯಾಯಾಲಯಗಳನ್ನು ಪರಿಚಯಿಸಲಾಯಿತು. ಆದರೆ ನೀವು ಎಂದಿಗೂ ಮುಕ್ತ ನ್ಯಾಯಾಲಯದ ವಿಚಾರಣೆಯನ್ನು ಬದಲಾಯಿಸಲಾಗುವುದಿಲ್ಲ. ಇವುಗಳು ಬಹಳ ಅಸಾಧಾರಣ ಸಂದರ್ಭಗಳಲ್ಲಿ ಸ್ಥಾಪಿಸಲಾದ ವಿಶೇಷ ಕ್ರಮಗಳಾಗಿವೆ ಮತ್ತು ಕ್ರಮೇಣ ನಾವು ಮತ್ತೆ ಸಾಮಾನ್ಯ ನ್ಯಾಯಾಲಯಕ್ಕೆ ಹಿಂತಿರುಗುತ್ತೇವೆ.

ಆದರೆ ನಾವು ನಿಯಮಿತ ವಿಚಾರಣೆಗೆ ಹೋಗುವ ಮೊದಲು, ಸಾರ್ವಜನಿಕ ಆರೋಗ್ಯ ತಜ್ಞರಿಂದ ನಮಗೆ ಮಾರ್ಗದರ್ಶನ ನೀಡಬೇಕಿದೆ" ಎಂದು ಅವರು ಹೇಳಿದರು.
 

Related Stories

No stories found.

Advertisement

X
Kannada Prabha
www.kannadaprabha.com