ಭಾರತ ಒಂದು ಇಂಚು ಭೂಮಿಯನ್ನು ಬಿಟ್ಟುಕೊಟ್ಟಿಲ್ಲ; ಆದರೆ ಕಾಂಗ್ರೆಸ್ ನಾಚಿಕೆ ಬಿಟ್ಟುಕೊಟ್ಟಿದೆ - ಬಿಜೆಪಿ

ಲಡಾಖ್ ಗಡಿಯಲ್ಲಿ ಭಾರತಕ್ಕೆ ಒಂದು ಇಂಚಿನಷ್ಟು ಭೂಮಿಯನ್ನು ಕೂಡ ಬಿಟ್ಟುಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ತಮ್ಮ ಮರ್ಯಾದೆಯನ್ನು ಬಿಟ್ಟುಕೊಟ್ಟಿದೆ ಎಂದು ಬಿಜೆಪಿ ಮಂಗಳವಾರ ಟೀಕಿಸಿದೆ. 
ಸಂಬೀತ್ ಪಾತ್ರ
ಸಂಬೀತ್ ಪಾತ್ರ
Updated on

ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತಕ್ಕೆ ಒಂದು ಇಂಚಿನಷ್ಟು ಭೂಮಿಯನ್ನು ಕೂಡ ಬಿಟ್ಟುಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ಪಕ್ಷ ಮಾತ್ರ ತಮ್ಮ ಮರ್ಯಾದೆಯನ್ನು ಬಿಟ್ಟುಕೊಟ್ಟಿದೆ ಎಂದು ಬಿಜೆಪಿ ಮಂಗಳವಾರ ಟೀಕಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, "ಸೋನಿಯಾಜಿ, ನಾವು ನಿಮಗೆ ಸ್ಪಷ್ಟವಾಗಿ ಹೇಳ ಬಯಸುತ್ತೇವೆ. ಭಾರತ ಒಂದು ಇಂಚಿನ ಭೂಮಿಯನ್ನು ಕೂಡ ಬಿಟ್ಟುಕೊಟ್ಟಿಲ್ಲ. ಆದರೆ, ಕಾಂಗ್ರೆಸ್ ನಾಚಿಕೆ ಬಿಟ್ಟಿರುವುದು ಮಾತ್ರ ಬೇಸರದ ಸಂಗತಿ" ಎಂದಿದ್ದಾರೆ.

ದೇಶದ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಕೀಯ ಅಥವಾ ರಾಜಿಯಿಲ್ಲ. ಇಂದು ನಾವೆಲ್ಲರೂ ನಮ್ಮ ಸೇನೆಯ ಬದ್ಧತೆ ಮತ್ತು ಸದೃಢತೆಯೊಂದಿಗೆ ನಿಲ್ಲಬೇಕು. ಚೀನಾ ನಮ್ಮ ದೇಶವನ್ನು ಆಕ್ರಮಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com