ಗುರುಗ್ರಾಮ: ಜೈಪುರ ರೈಲು ಹಳಿಗೆ ನಿರ್ಮಿಸಿದ್ದ ಮೇಲ್ಸೇತುವೆ ಉದ್ಘಾಟನೆಯಾದ ಕೇವಲ ಆರು ತಿಂಗಳಲ್ಲೇ ಕುಸಿದಿರುವುದು ತಲ್ಲಣಕ್ಕೆ ಕಾರಣವಾಗಿದೆ. ಹರಿಯಾಣ ಲೋಕೋಪಯೋಗಿ ಸಚಿವರು ಕಳದೆ ವರ್ಷ ಈ ಮೇತ್ಸೇತುವೆ ಉದ್ಘಾಟಿಸಿದ್ದರು.
ಗುಣಮಟ್ಟವಿಲ್ಲದ ವಸ್ತುಗಳು ಹಾಗೂ ಅಕಾಲಿಕ ಮಳೆಯಿಂದಾಗಿ ಮೇಲ್ಸೇತುವೆ ಕುಸಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಮೇಲ್ಸೇತುವೆ ನಿರ್ಮಾಣವಾಗಬೇಕಾದರೆ ಅಧಿಕಾರಿಗಳು ಸರಿಯಾದ ಗಮನ ಹರಿಸಿಲ್ಲ ಎನ್ನುತ್ತಿದ್ದಾರೆ ಸ್ಥಳೀಯ ಜನರು
ತಕ್ಷಣಕ್ಕೆ ಯಾವುದೇ ಸಾವು-ನೋವು, ಆಸ್ತಿಪಾಸ್ತಿ ನಷ್ಟದ ವಿವರ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Advertisement