ಕೋವಿಡ್-19 ಗೆದ್ದ ದೆಹಲಿ ವೈದ್ಯೆಗೆ ನೆರೆಯವರಿಂದ ಬೈಗುಳ, ಬೆದರಿಕೆ! 

ಕೋವಿಡ್-19 ನ್ನು ಗೆದ್ದ ಜನರನ್ನು ಸಮಾಜದಲ್ಲಿನ ಕೆಲವರು ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಇಂತಹದ್ದೇ ಪರಿಸ್ಥಿತಿಯನ್ನು ದೆಹಲಿಯ ವೈದ್ಯೆಯೊಬ್ಬರು ಎದುರಿಸಿದ್ದಾರೆ. 
ಕೋವಿಡ್-19 ಗೆದ್ದ ದೆಹಲಿ ವೈದ್ಯೆಗೆ ನೆರೆಯವರಿಂದ ಬೈಗುಳ, ಬೆದರಿಕೆ!
ಕೋವಿಡ್-19 ಗೆದ್ದ ದೆಹಲಿ ವೈದ್ಯೆಗೆ ನೆರೆಯವರಿಂದ ಬೈಗುಳ, ಬೆದರಿಕೆ!
Updated on

ನವದೆಹಲಿ: ಕೋವಿಡ್-19 ನ್ನು ಗೆದ್ದ ಜನರನ್ನು ಸಮಾಜದಲ್ಲಿನ ಕೆಲವರು ಹೇಗೆಲ್ಲಾ ನಡೆಸಿಕೊಳ್ಳುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ಇಂತಹದ್ದೇ ಪರಿಸ್ಥಿತಿಯನ್ನು ದೆಹಲಿಯ ವೈದ್ಯೆಯೊಬ್ಬರು ಎದುರಿಸಿದ್ದಾರೆ. 

ಅರುಣಾ ಆಸೀಫ್ ಅಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯೆ ಕ್ವಾರಂಟೈನ್ ಮುಕ್ತಾಯಗೊಳಿಸಿದ ಬಳಿಕ ಮನೆಗೆ ವಾಪಸ್ ಬಂದಿದ್ದರು. ಆದರೆ ಮನೆಗೆ ಬಂದಿದ್ದ ವೈದ್ಯೆಗೆ ನೆರೆ ಮನೆಯವರು ಕಿರುಕುಳ ನೀಡಿದ್ದು, ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವೈದ್ಯೆ ಮನೆಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ಆಕೆ ವೈಎಂಸಿಎ ಐಸೊಲೇಷನ್ ಕೇಂದ್ರದಲ್ಲಿದ್ದು ಕೋವಿಡ್-19 ನೆಗೆಟೀವ್ ಬಂದ ನಂತರ ಪ್ಲಾಟ್ ಗೆ ಆಗಮಿಸಿದರು.

ಆದರೆ ಮತ್ತೆ ಆಕೆಗೆ ನೆರೆಯವರು ಕಿರುಕುಳ ನೀಡಿದ್ದು, ಬೆದರಿಕೆ ಹಾಕಿದ್ದಾರೆ, ಈ ಬಗ್ಗೆ ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ (ಆರ್ ಡಬ್ಲ್ಯೂಎ) ಜೊತೆಗೂ ಮಾತನಾಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com