ಡೆಹ್ರಾಡೂನ್: ಪವಿತ್ರ ಪುಣ್ಯಕ್ಷೇತ್ರ ಬದರಿನಾಥ ದೇಗುಲ ದ್ವಾರ ತೆರೆಯಲಾಗಿದೆ. ಇಂದು ಮುಂಜಾನೆ 4:30 ನಿಮಿಷಕ್ಕೆ ವೇದ ಮಂತ್ರಗಳ ಘೋಷಗಳೊಂದಿಗೆ ದೇಗುಲ ದ್ವಾರ ತೆರೆಯಲಾಯಿತು. ಅನಂತರ ದೇಗುಲವನ್ನು ಹೂವಿನಿಂದ ಸುಂದರವಾಗಿ ಅಲಂಕರಿಸಿ ಅರ್ಚಕರು ಪೂಜಾ ಕೈಂಕರ್ಯ ನಡೆಸಿದರು.
ಪ್ರಧಾನ ಅರ್ಚಕ ಸೇರಿ ಒಟ್ಟು 28 ಮಂದಿ ಮಾತ್ರ ದೇಗುಲ ದ್ವಾರ ತೆರೆದಾಗ ಬದರಿನಾಥನ ಸನ್ನಿಧಿಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕಿನ ಕಾರಣದಿಂದ ದೇಗಲು ದ್ವಾರ ಮುಚ್ಚಲಾಗಿತ್ತು.
Advertisement