ಆರ್ಥಿಕ ಪ್ಯಾಕೇಜ್ ನ್ನು ಇತರ ರಾಷ್ಟ್ರಗಳೊಂದಿಗೆ ಹೋಲಿಸಿ-ನಿರ್ಮಲಾ ಸೀತಾರಾಮನ್ 

ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು  ದೇಶದಲ್ಲಿ ಪ್ಯಾಕೇಜ್  ಘೋಷಿಸುವ ಮೊದಲು ಕೇಂದ್ರ ಸರ್ಕಾರ ಇತರ ದೇಶಗಳ ಪ್ರೋತ್ಸಾಹಕ ಪ್ಯಾಕೇಜ್‌ಗಳನ್ನು ಅಧ್ಯಯನ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್
Updated on

ನವದೆಹಲಿ: ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು  ದೇಶದಲ್ಲಿ ಪ್ಯಾಕೇಜ್  ಘೋಷಿಸುವ ಮೊದಲು ಕೇಂದ್ರ ಸರ್ಕಾರ ಇತರ ದೇಶಗಳ ಪ್ರೋತ್ಸಾಹಕ ಪ್ಯಾಕೇಜ್‌ಗಳನ್ನು ಅಧ್ಯಯನ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಎದುರಾಗಿದ್ದ ಪರಿಸ್ಥಿತಿಯನ್ನು ನಿಭಾಯಿಸಲು ಹಾಗೂ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ತಿಂಗಳ ಆರಂಭದಲ್ಲಿ 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಆರ್ಥಿಕ ಪ್ಯಾಕೇಜ್ ನ್ನು ಘೋಷಿಸಿದ್ದರು. 

ದೇಶದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮುನ್ನವೇ ಇತರ ರಾಷ್ಟ್ರಗಳ ಪ್ಯಾಕೇಜ್ ನಲ್ಲಿ ಏನಿದೆ ಎಂಬುದನ್ನು ಅಧ್ಯಯನ ಮಾಡಲಾಗಿದೆ. ಪ್ರತಿಯೊಂದು ದೇಶವು ವಿತ್ತಿಯ, ಹಣಕಾಸಿನ, ಖಾತರಿ, ಕೇಂದ್ರದ ದ್ರವ್ಯತೆ ಮತ್ತಿತರ ಕ್ರಮಗಳನ್ನು ಇಟ್ಟುಕೊಂಡು ಪ್ಯಾಕೇಜ್ ಸಿದ್ಧಪಡಿಸಿವೆ ಎಂದು ಫೇಸ್ ಬುಕ್ ನಲ್ಲಿ ಬಿಜೆಪಿ ಮುಖಂಡ ನಳಿನ್ ಕೊಹ್ಲಿ ಅವರೊಂದಿಗಿನ ಸಂವಾದದ ವೇಳೆಯಲ್ಲಿ ಸೀತಾರಾಮನ್ ತಿಳಿಸಿದ್ದಾರೆ. 

ಇತರ ರಾಷ್ಟ್ರಗಳಿಗಿಂತ ಭಾರತ ಹೊರತಾಗಿಲ್ಲ. ಆದರೆ, ಅನುಪಾತ ಬದಲಾಗಬಹುದು. ಅಭಿವೃದ್ಧಿ ಹೊಂದಿದ ದೇಶಗಳು ಕೆಲವು ಸಂಸ್ಥೆಗಳನ್ನು ಹೊಂದಿರುವಾಗ ಅವರಿಗೆ ಒಂದು ಮಾರ್ಗದಲ್ಲಿ ಹೋಗಲು ಮತ್ತು ಇನ್ನೊಂದು ಮಾರ್ಗದಲ್ಲಿ ಕಡಿಮೆ ರೀತಿಯಲ್ಲಿ ವರ್ತಿಸಬಹುದು ಎಂದು ಅವರು ಹೇಳಿದ್ದಾರೆ. 

ಕೇಂದ್ರ ಸರ್ಕಾರ ಕ್ರಮಗಳು ಜನ ಧನ್ ಖಾತೆಗಳ ಮೂಲಕ ಜನರ ಕೈಗೆ ಹಣವನ್ನು ತುಂಬುವ  ಪ್ರಯತ್ನವನ್ನು ಒಳಗೊಂಡಿವೆ ಮತ್ತು ಆರ್ಥಿಕತೆಗೆ ಹೆಚ್ಚಿನ ದ್ರವ್ಯತೆ ಹರಿದುಬರಲಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. 

ಕೊರೋನಾವೈರಸ್ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ವಿಶೇಶ ಆರ್ಥಿಕ ಪ್ರಾಕೇಜ್ ಕ್ರಮಗಳು ಬಹಳ ಪರಿಣಾಮ ಬೀರಲಿವೆ, ನಿಗದಿತ ವೆಚ್ಚ ಮತ್ತು ಕೆಲಸದ ಬಂಡವಾಳವನ್ನು ಬ್ಯಾಂಕ್ ಗಳ ಮೂಲಕ ನಿರ್ವಹಿಸಬೇಕು ಎಂದು ನಿರ್ಮಲಾ ಸೀತಾರಾಮನ್ ಈ ಹಿಂದೆ ಹೇಳಿಕೆ ನೀಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com