ಡೆಹ್ರಾಡೂನ್: ದಿನದಿನದ ತಾಪಮಾನ ಏರಿಕೆಯ ಪರಿಣಾಮ ಉತ್ತರಾಖಂಡ ಕಾಡುಗಳಲ್ಲಿ ಭಯಂಕರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಇದುವರೆಗೆ 46 ಕಾಡ್ಗಿಚ್ಚಿನ ಘಟನೆಗಳು ವರದಿಯಾಗಿದ್ದು 51.34 ಹೆಕ್ಟೇರ್ ಅರಣ್ಯ ನಾಶವಾಗಿದೆ.
ಕಾಡ್ಗಿಚ್ಚಿನ ಪರಿಣಾಮ . ಅರಣ್ಯ ಇಲಾಖೆಗೆ ಸಹ ತೀವ್ರ ಸಂಕಷ್ಟ ಎದುರಾಗಿದ್ದು 1.32 ಲಕ್ಷ ನಷ್ಟವಾಗಿದೆ ಎನ್ನಲಾಗಿದೆ.
ಕುಮಾವೂನ್ ಪ್ರದೇಶವೊಂದರಲ್ಲೇ 21 ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗಿದ್ದು ರಾಜ್ಯದಲ್ಲಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಎದುರಿಸುತ್ತಿರುವ ಪ್ರದೇಶಗಳಲ್ಲಿ ಇದು ಸಹ ಒಂದಾಗಿದೆ.
ಕಾಡ್ಗಿಚ್ಚು ರಾಜ್ಯದಾದ್ಯಂತ ಎಷ್ಟು ಹಾನಿಯನ್ನುಂಟುಮಾಡುತ್ತಿದೆಎನ್ನುವುದನ್ನು ಐಎಫ್ಎಸ್ ವೈಭವ್ ಸಿಂಗ್ ಹಂಚಿಕೊಂಡಿರುವ ವೀಡಿಯೋವೊಂದು ಬಹಿರಂಗಪಡಿಸಿದೆ.
ಇನ್ನು ಇಲ್ಲಿಯವರೆಗೆ, ಕಾಡ್ಗಿಚ್ಚಿನಿಂದ ಪಾರಾಗಲು ಪ್ರಯತ್ನಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಮೇ ವರೆಗೆ ಸುಮಾರು 1,170 ಕಾಡ್ಗಿಚ್ಚಿನ ಪ್ರಕರಣಗಳು ವರದಿಯಾಗಿದ್ದವು.
Advertisement