ಮಹಾರಾಷ್ಟ್ರ: ವಾಮಾಚಾರದ ಶಂಕೆ, ಅಜ್ಜಿಯನ್ನು ಕೊಂದ ಮೊಮ್ಮಗ! 

ವಾಮಾಚಾರದ ಶಂಕೆಯಿಂದ ಮೊಮ್ಮಗ ಅಜ್ಜಿಯನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿದೆ. 
ಮಹಾರಾಷ್ಟ್ರ: ವಾಮಾಚಾರದ ಶಂಕೆ, ಅಜ್ಜಿಯನ್ನು ಕೊಂದ ಮೊಮ್ಮಗ! 
ಮಹಾರಾಷ್ಟ್ರ: ವಾಮಾಚಾರದ ಶಂಕೆ, ಅಜ್ಜಿಯನ್ನು ಕೊಂದ ಮೊಮ್ಮಗ! 
Updated on

ಪಾಲ್ಘರ್: ವಾಮಾಚಾರದ ಶಂಕೆಯಿಂದ ಮೊಮ್ಮಗ ಅಜ್ಜಿಯನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ನಡೆದಿದೆ. 

ಯಶ್ವಂತ್ ನಗರದ ಕೈಲಾಸ್ ಡಂಗ್ಟೆ ಎಂಬ ವ್ಯಕ್ತಿ ಆರೋಪಿಯಾಗಿದ್ದು ತನ್ನ ಅಜ್ಜಿ ತನ್ನ ವಿರುದ್ಧ ವಾಮಾಚಾರ ಮಾಡುತ್ತಿದ್ದು, ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿರುವುದು ಇದೇ ಕಾರಣಕ್ಕೆ ಎಂದು ಭಾವಿಸಿದ್ದ. ಈ ಕಾರಣದಿಂದಾಗಿಯೇ ಅಜ್ಜಿಯ ಜೊತೆ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. 

ಭಾನುವಾರದಂದು ತನ್ನ ಅಜ್ಜಿಯ ಮೇಲೆ ಕೊಡಲಿಯಿಂದ ಹೊಡೆದ್ದಾನೆ, ರಕ್ತದ ಮಡುವಿನಲ್ಲಿ ಬಿದ್ದ 62 ವರ್ಷದ ವೃದ್ಧೆ ಸಾವನ್ನಪ್ಪಿದ್ದಾರೆ. ಕುಟುಂಬ ಸದಸ್ಯರೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಐಪಿಸಿ ಸೆಕ್ಷನ್ 302 ರ ಪ್ರಕಾರ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com