ಅಸ್ಸಾಂ- ಮಿಜೋರಾಮ್ ಗಡಿ ವಿವಾದದಲ್ಲಿ ಘರ್ಷಣೆ: ಪ್ರಧಾನಿ ಕಚೇರಿ, ಗೃಹ ಸಚಿವಾಲಯಕ್ಕೆ ಸಿಎಂ ಸೋನೋವಾಲ್ ಕರೆ!

ಅಸ್ಸಾಂ-ಮಿಜೋರಾಮ್ ಗಡಿ ವಿವಾದ ಘರ್ಷಣೆಗೆ ತಿರುಗಿದ್ದು ಪ್ರಧಾನಿ ಕಚೇರಿ ಹಾಗೂ ಗೃಹ ಸಚಿವಾಲಯಕ್ಕೆ ಸಿಎಂ ಸರ್ಬಾನಂದ ಸೋನೋವಾಲ್ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. 
ಅಸ್ಸಾಂ- ಮಿಜೋರಾಮ್ ಗಡಿ ವಿವಾದದಲ್ಲಿ ಘರ್ಷಣೆ: ಪ್ರಧಾನಿ ಕಚೇರಿ, ಗೃಹ ಸಚಿವಾಲಯಕ್ಕೆ ಸಿಎಂ ಸೋನೋವಾಲ್ ಕರೆ!
ಅಸ್ಸಾಂ- ಮಿಜೋರಾಮ್ ಗಡಿ ವಿವಾದದಲ್ಲಿ ಘರ್ಷಣೆ: ಪ್ರಧಾನಿ ಕಚೇರಿ, ಗೃಹ ಸಚಿವಾಲಯಕ್ಕೆ ಸಿಎಂ ಸೋನೋವಾಲ್ ಕರೆ!
Updated on

ನವದೆಹಲಿ: ಅಸ್ಸಾಂ-ಮಿಜೋರಾಮ್ ಗಡಿ ವಿವಾದ ಘರ್ಷಣೆಗೆ ತಿರುಗಿದ್ದು ಪ್ರಧಾನಿ ಕಚೇರಿ ಹಾಗೂ ಗೃಹ ಸಚಿವಾಲಯಕ್ಕೆ ಸಿಎಂ ಸರ್ಬಾನಂದ ಸೋನೋವಾಲ್ ಕರೆ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. 

ಭಾನುವಾರದಂದು ಉಂಟಾದ ಗಡಿ ಘರ್ಷಣೆಯಲ್ಲಿ ಹಲವಾರು ಮಳಿಗೆ ಹಾಗೂ ಮನೆಗಳು ಬೆಂಕಿಗೆ ಆಹುತಿಯಾಗಿ ಹಿಂಸಾಚಾರಕ್ಕೆ ತಿರುಗಿತ್ತು. ಈ ಬೆನ್ನಲ್ಲೇ ಸಿಎಂ ಸರ್ಬಾನಂದ ಸೋನೋವಾಲ್ ಪ್ರಧಾನಿ ಕಚೇರಿ ಹಾಗೂ ಗೃಹ ಸಚಿವಾಲಯ ಹಾಗೂ ಮಿಜೋರಾಮ್ ಸಿಎಂ ಝೋರಮತಂಗ ಅವರ ಜೊತೆ ಮಾತುಕತೆ ನಡೆಸಿದ್ದಾರೆ. 

ಹಿಂಸಾಚಾರಕ್ಕೆ ತಿರುಗಿದ ಘಟನೆಯಲ್ಲಿ ಕನಿಷ್ಟ 8 ­ಜನರಿಗೆ ತೀವ್ರವಾದ ಗಾಯಗಳಾಗಿವೆ. ಅಸ್ಸಾಂನ ಕ್ಯಾಚರ್ ಮತ್ತು ಮಿಜೋರಾಂನ ಕೋಲಾಸಿಬ್ ನ ಗಡಿ ಭಾಗದಲ್ಲಿ ಈ ಹಿಂಸಾಚಾರಗಳು ವರದಿಯಾಗಿವೆ. ಮಿಜೋರಾಮ್ ಸಿಎಂ ಜೊತೆಗಿನ ಮಾತುಕತೆ ವೇಳೆ ಸಿಎಂ ಸೋನೋವಾಲ್ ಗಡಿ ಭಾಗದ ವಿಷಯಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com