ಮಹಾರಾಷ್ಟ್ರಕ್ಕೆ ಕಂಗನಾ ಕ್ಷಮೆ ಯಾಚಿಸಬೇಕು: ಸಂಜಯ್ ರೌತ್

ಕಂಗನಾ ಕುರಿತ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲು ನಿರಾಕರಿಸಿರುವ ಶಿವಸೇನೆಯ ಸಂಸದ ಸಂಜಯ್ ರೌತ್, ತಾವು ಕ್ಷಮೆ ಕೇಳುವುದಿಲ್ಲ ಬದಲಾಗಿ ಮಹಾರಾಷ್ಟ್ರಕ್ಕೆ ನಟಿ ಕಂಗನಾ ರನಾವತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. 
ಸಂಜಯ್ ರಾವತ್
ಸಂಜಯ್ ರಾವತ್

ಕಂಗನಾ ಕುರಿತ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲು ನಿರಾಕರಿಸಿರುವ ಶಿವಸೇನೆಯ ಸಂಸದ ಸಂಜಯ್ ರೌತ್, ತಾವು ಕ್ಷಮೆ ಕೇಳುವುದಿಲ್ಲ ಬದಲಾಗಿ ಮಹಾರಾಷ್ಟ್ರಕ್ಕೆ ನಟಿ ಕಂಗನಾ ರನಾವತ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. 

ಒಂದು ವೇಳೆ ಕಂಗನಾ ಕ್ಷಮೆ ಕೇಳಿದರೆ ನಾನು ಕ್ಷಮೆ ಕೇಳುವ ಬಗ್ಗೆ ಯೋಚಿಸುತ್ತೇನೆ ಎಂದು ಸಂಜಯ್ ರೌತ್ ಹೇಳಿದ್ದಾರೆ.

ಮುಂಬೈ ನ್ನು ಮಿನಿ ಪಾಕಿಸ್ತಾನ ಎಂದು ಕಂಗನಾ ಹೇಳಿದ್ದಾರೆ. ಅಹ್ಮದಾಬಾದ್ ಬಗ್ಗೆಯೂ ಇದನ್ನೇ ಹೇಳುವುದಕ್ಕೆ ಕಂಗನಾಗೆ ಧೈರ್ಯವಿದೆಯೇ ಎಂದು ಸಂಜಯ್ ರೌತ್ ಪ್ರಶ್ನಿಸಿದ್ದಾರೆ.

ಸಂಜಯ್ ರೌತ್ ತಮಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಂಗನಾ ಟ್ವೀಟ್ ನಲ್ಲಿ ಆರೋಪಿಸಿದ್ದರು. ಅಷ್ಟೇ ಅಲ್ಲದೇ ಈ ಘಟನೆಯ ಬಳಿಕ ತಮಗೆ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದೂ ಕಂಗನಾ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com