ಕಂಗನಾಗೆ ವೈ-ಪ್ಲಸ್ ಭದ್ರತೆ ನೀಡುವ ನಿರ್ಧಾರ ಖಂಡಿಸಿದ ಮಹಾ ವಿಕಾಸ್ ಅಘಾಡಿ ನಾಯಕರು

ವಿವಾದಾತ್ಮಕ ಹೇಳಿಕೆಗಳಿಂದ ಸದ್ದು ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ವೈ-ಪ್ಲಸ್ ಭದ್ರತೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮಹಾ ವಿಕಾಸ್ ಅಘಾಡಿ ನಾಯಕರು ಸೋಮವಾರ ಖಂಡಿಸಿದ್ದಾರೆ.
ಕಂಗನಾ ರನೌತ್
ಕಂಗನಾ ರನೌತ್
Updated on

ಮುಂಬೈ: ವಿವಾದಾತ್ಮಕ ಹೇಳಿಕೆಗಳಿಂದ ಸದ್ದು ಮಾಡುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ವೈ-ಪ್ಲಸ್ ಭದ್ರತೆ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮಹಾ ವಿಕಾಸ್ ಅಘಾಡಿ ನಾಯಕರು ಸೋಮವಾರ ಖಂಡಿಸಿದ್ದಾರೆ.

ಮುಂಬೈ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಎಂದು ಕರೆಯುವ ಮೂಲಕ ಕಂಗನಾ ರನೌತ್ ಮರಾಠಿ ಜನರನ್ನು ಅವಮಾನಿಸಿದ್ದಾರೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶುಮುಖ್ ಹೇಳಿದ್ದಾರೆ.

ಮಹಾರಾಷ್ಟ್ರವನ್ನು ಅವಮಾನಿಸಿದ ಕಂಗನಾ ರನೌತ್‌ಗೆ ಕೇಂದ್ರ ಸರ್ಕಾರ ವೈ ಭದ್ರತೆಯನ್ನು ಒದಗಿಸಿರುವುದು ಬಹಳ ಆಶ್ಚರ್ಯಕರವಾಗಿದೆ. ಮುಂಬೈ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ, ಅದು ಎಲ್ಲರಿಗೂ ಸೇರಿದೆ. ವಿವಾದಾತ್ಮಕ ನಟಿಗೆ ವೈ-ಪ್ಲಸ್ ಭದ್ರತೆ ನೀಡುವ ಮೂಲಕ ಕೇಂದ್ರವು ತಪ್ಪು ಸಂದೇಶವನ್ನು ನೀಡಿದೆ ”ಎಂದು ದೇಶಮುಖ್ ಹೇಳಿದ್ದಾರೆ.

ವೈ ಭದ್ರತೆ ನೀಡುವುದು ಬಿಜೆಪಿಯ ಆಜ್ಞೆಯ ಮೇರೆಗೆ ನಟಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಾಬೀತು ಮಾಡಿದೆ ಎಂದು ಕಾಂಗ್ರೆಸ್ ಸಚಿವ ವಿಜಯ್ ವಾಡೆಟ್ಟಿವಾರ್ ಹೇಳಿದ್ದಾರೆ. 
“ಅವರು ಬಿಜೆಪಿಯಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡರೆ ನಾವು ಆಶ್ಚರ್ಯಪಡಬೇಕಾಗಿಲ್ಲ. ನಟಿ ಬಿಜೆಪಿಯ ಕೈಗೊಂಬೆ. ಮಹಾರಾಷ್ಟ್ರ ಮತ್ತು ಮುಂಬೈ ಪೊಲೀಸರನ್ನು ಅವಮಾನಿಸಿದ್ದಕ್ಕಾಗಿ ಬಿಜೆಪಿ ಭದ್ರತೆಯನ್ನು ನೀಡಿದೆ ”ಎಂದು ವಾಡೆಟ್ಟಿವಾರ್ ಆರೋಪಿಸಿದ್ದಾರೆ.

ಇನ್ನು ಕಂಗನಾ ರನೌತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕೆಂಬ ತನ್ನ ಹಿಂದಿನ ಬೇಡಿಕೆಯನ್ನು ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಪುನರುಚ್ಚರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com