ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಶರದ್ ಪವಾರ್ ಮತ್ತಿತರರಿಗೆ ಬೆದರಿಕೆ ಕರೆ: ಕೊಲ್ಕತ್ತಾ ವ್ಯಕ್ತಿ ಬಂಧನ

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್.ಸಿ.ಪಿ ವರಿಷ್ಠ ಶರದ್ ಪವಾರ್, ಗೃಹ ಸಚಿವ ಅನಿಲ್ ದೇಶ್ ಮುಖ್ ಮತ್ತು ಶಿವಸೇನಾ ವಕ್ತಾರ ಸಂಜಯ್ ರಾವತ್ ಅವರಿಗೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳದ ಜಿಮ್ ತರಬೇತುದಾರನನ್ನು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.
ಶರದ್ ಪವಾರ್-ಉದ್ಧವ್ ಠಾಕ್ರೆ
ಶರದ್ ಪವಾರ್-ಉದ್ಧವ್ ಠಾಕ್ರೆ

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್.ಸಿ.ಪಿ ವರಿಷ್ಠ ಶರದ್ ಪವಾರ್, ಗೃಹ ಸಚಿವ ಅನಿಲ್ ದೇಶ್ ಮುಖ್ ಮತ್ತು ಶಿವಸೇನಾ ವಕ್ತಾರ ಸಂಜಯ್ ರಾವತ್ ಅವರಿಗೆ ಬೆದರಿಕೆ ಕರೆ ಮಾಡಿದ್ದ ಪಶ್ಚಿಮ ಬಂಗಾಳದ ಜಿಮ್ ತರಬೇತುದಾರನನ್ನು ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಕೊಲ್ಕತ್ತಾ ಪೊಲೀಸರ ಜತೆಗೂಡಿ ನಡೆಸಿದ ಕಾರ್ಯಾಚರಣೆಯಲ್ಲಿ ಕೊಲ್ಕತ್ತಾದ ಪಲಾಶ್ ಬೋಸ್ ಎಂಬುವರನ್ನು ಬಂಧಿಸಿದೆ. ಈತ ಭೂಗದ ಪಾತಕಿ ದಾವೋದ್ ಇಬ್ರಾಹಿಂ ಸಿಂಡಿಕೇಟ್ ಗೆ ಸೇರಿದವನೆಂದು ಹೇಳಲಾಗಿದೆ.
 
ಎಟಿಎಸ್ ನ ಇನ್ಸ್ ಪೆಕ್ಟರ್, ಎನ್ ಕೌಂಟರ್ ಸ್ಪೆಷಲಿಸ್ಟ್, ಕನ್ನಡಿಗ ದಯಾನಾಯಕ್ ನೇತೃತ್ವದ ಪೊಲೀಸ್ ತಂಡ ಪಲಾಶ್ ಬೋಸ್ ಎಂಬುರನ್ನು ಬಂಧಿಸಿದ್ದು, ಇದಕ್ಕೆ ಕೊಲ್ಕತ್ತಾ ಪೊಲೀಸರ ಸಹಕಾರ ಪಡೆದಿದೆ. 

ಬಂಧಿತನಿಂದ ಎರಡು ಮೊಬೈಲ್ ವಶಪಡಿಸಿಕೊಂಡಿದ್ದು, ಒಂದು ಸ್ಥಳೀಯ ಸಿಮ್ ಹೊಂದಿದ್ದು, ಮತ್ತೊಂದು ಅಂತಾರಾಷ್ಟ್ರೀಯ ಸಿಮ್ ಒಳಗೊಂಡಿದೆ. ಬಂಧಿತ ತಾನು ಬೆದರಿಕೆ ಕರೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಈತ ದುಬೈನಲ್ಲಿ 15 ವರ್ಷಗಳ ಕಾಲ ಕೆಲಸ ಮಾಡಿದ್ದು, ವಿಜ್ಞಾನ ಪದವೀಧರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com