ನೆಹರು-ಗಾಂಧಿ ಕುಟುಂಬದ ಬಗ್ಗೆ ಠಾಕೂರ್ ಹೇಳಿಕೆಗೆ ವಿರೋಧ: ಲೋಕಸಭೆಯ ಕಲಾಪ 4 ಬಾರಿ ಮುಂದೂಡಿಕೆ
ನವದೆಹಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿ-ಎಂ ಕೇರ್ಸ್ ವಿಷಯದಲ್ಲಿ ನೆಹರು-ಗಾಂಧಿ ಕುಟುಂಬದ ಹೆಸರನ್ನು ಉಲ್ಲೇಖಿಸಿ ನೀಡಿದ ಹೇಳಿಕೆಗೆ ವ್ಯಕ್ತವಾದ ವಿರೋಧದಿಂದ ಒಂದೇ ದಿನದಲ್ಲಿ ಲೋಕಸಭೆ ಕಲಾಪವನ್ನು ನಾಲ್ಕು ಬಾರಿ ಮುಂದೂಡುವಂತಾಯಿತು.
ತೆರಿಗೆ ಮತ್ತು ಇತರ ಕಾನೂನುಗಳ ಮಸೂದೆಯ ಮಂಡನೆ ವೇಳೆ ಅನುರಾಗ್ ಠಾಕೂರ್ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯನ್ನು ಉಲ್ಲೇಖಿಸಿ, ಈ ಟ್ರಸ್ಟ್ ನ್ನು ಜವಾಹರ್ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಸ್ಥಾಪನೆಯಾಗಿತ್ತು. ಆದರೆ ಇದನ್ನು ಸಾರ್ವಜನಿಕ ಟ್ರಸ್ಟ್ ಎಂದು ನೋಂದಣಿ ಮಾಡದೇ ಇದ್ದರೂ ಸಹ ಎಫ್ ಸಿಆರ್ ಎ ಯೂ ಸೇರಿದಂತೆ ಅಗತ್ಯವಿದ್ದ ಎಲ್ಲಾ ಕ್ಲಿಯರೆನ್ಸ್ ಗಳೂ ದೊರೆಯಿತು. ಪಿಎಂ-ಕೇರ್ಸ್ ಫಂಡ್ ಸಾಂವಿಧಾನಿಕವಾಗಿ ಸ್ಥಾಪನೆಯಾಗಿರುವ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ನೆಹರು-ಗಾಂಧಿ ಏಕೈಕ ಕುಟುಂಬದ ಲಾಭಕ್ಕಾಗಿ ಸ್ಥಾಪನೆಯಾಗಿತ್ತು ಎಂದು ಠಾಕೂರ್ ಹೇಳಿದರು.
ತಕ್ಷಣೆವೇ ಠಾಕೂರ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿತು, ಪರಿಣಾಮ ಸ್ಪೀಕರ್ ಓಂ ಬಿರ್ಲಾ ಕಪಾಲವನ್ನು ಮುಂದೂಡಿದರು. ಸಂಜೆ 6 ಕ್ಕೆ ಕಲಾಪ ಪುನಾರಂಭವಾದಾಗ, ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಠಾಕೂರ್, ನೋವುಂಟು ಮಾಡುವುದು ನನ್ನ ಹೇಳಿಕೆಯ ಉದ್ದೇಶವಾಗಿರಲಿಲ್ಲ. ಆದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ