ಜಾರ್ಖಂಡ್: ಬುಡಕಟ್ಟು ಕ್ರಿಶ್ಚಿಯನ್ನರಿಗೆ ‘ಜೈ ಶ್ರೀ ರಾಮ್’ ಹೇಳುವಂತೆ ಬಲವಂತ, ಹಲ್ಲೆಗೈದು ತಲೆ ಬೋಳಿಸಿದ ದುಷ್ಕರ್ಮಿಗಳು

ಗೋಹತ್ಯೆ ಮಾಡಿದ್ದಾರೆ ಎಂಬ ಅನುಮಾನದ ಮೇಲೆ ಏಳು ಬುಡಕಟ್ಟು ಕ್ರೈಸ್ತರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ತಲೆ ಬೋಳಿಸಿದ್ದಲ್ಲದೆ ಅವರಿಗೆ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಬಲವಂತ ಮಾಡಿದ ಕ್ರೂರ ಘಟನೆ ಜಾರ್ಖಂಡ್ ನ ಸಿಮ್ಡೆಗಾದ ಭೇರಿಕುದಾರ್ ಗ್ರಾಮದಲ್ಲಿ ನಡೆದಿದೆ.
ಬುಡಕಟ್ಟು ಕ್ರಿಶ್ಚಿಯನ್ನರು
ಬುಡಕಟ್ಟು ಕ್ರಿಶ್ಚಿಯನ್ನರು
Updated on

ರಾಂಚಿ: ಗೋಹತ್ಯೆ ಮಾಡಿದ್ದಾರೆ ಎಂಬ ಅನುಮಾನದ ಮೇಲೆ ಏಳು ಬುಡಕಟ್ಟು ಕ್ರೈಸ್ತರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿ, ತಲೆ ಬೋಳಿಸಿದ್ದಲ್ಲದೆ ಅವರಿಗೆ ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಬಲವಂತ ಮಾಡಿದ ಕ್ರೂರ ಘಟನೆ ಜಾರ್ಖಂಡ್ ನ ಸಿಮ್ಡೆಗಾದ ಭೇರಿಕುದಾರ್ ಗ್ರಾಮದಲ್ಲಿ ನಡೆದಿದೆ.

ಗ್ರಾಮಸ್ಥರ ಪ್ರಕಾರ, ಸೆಪ್ಟೆಂಬರ್ 16ರಂದು ಈ ಘಟನೆ ನಡೆದಿದ್ದು, ಬಿದಿರಿನ ಕೋಲು ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದ ಗ್ರಾಮ ಪ್ರವೇಶಿಸಿದ 60ಕ್ಕೂ ಹೆಚ್ಚು ಜನರ ಗುಂಪು ಬುಡಕಟ್ಟು ಕ್ರೈಸ್ತರ ಮೇಲೆ ಹಲ್ಲೆ ನಡೆಸಿದೆ.

ಸೆಪ್ಟೆಂಬರ್ 16 ರಂದು ಈ ಘಟನೆ ನಡೆದಿದ್ದು, ಮರುದಿನ ದೂರು ದಾಖಲಿಸಲಾಗಿದೆ. ಸೆಪ್ಟೆಂಬರ್ 25 ರಂದು ಸ್ಥಳೀಯ ಕಾರ್ಯಕರ್ತರೊಬ್ಬರು ಈ ವಿಷಯವನ್ನು ಪ್ರಸ್ತಾಪಿಸಿದ ನಂತರವೇ ಈ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ನಾಲ್ಕು ಜನರನ್ನು ಬಂಧಿಸಿದ್ದಾರೆ.

“ನಾವು ಒಂಬತ್ತು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದೇವೆ. ಉಳಿದವರಿಗಾಗಿ ಶೋಧ ಮುಂದುವರೆದಿದೆ. ಎಲ್ಲಾ ಆರೋಪಿಗಳ ವಿರುದ್ಧ ಎಸ್ ಸಿ/ಎಸ್ ಟಿ ಕಾಯ್ದೆ ಹಾಗೂ ಇತರೆ ಸೆಕ್ಷನ್ ಗಳಡಿ ಕೇಸ್ ದಾಖಲಿಸಲಾಗಿದೆ”ಎಂದು ಸಿಮ್ಡೆಗಾ ಪೊಲೀಸ್ ವರಿಷ್ಠಾಧಿಕಾರಿ ಶಾಮ್ಸ್ ಟ್ಯಾಬ್ರೆಜ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com