ಏ.20ರ ಬಳಿಕ ಈ ನಾಲ್ಕು ವಲಯಗಳಿಗೆ ವಿನಾಯ್ತಿ: ಗೃಹ ಸಚಿವಾಲಯ ಆದೇಶದಲ್ಲಿ ಹೀಗಿದೆ

ಏಪ್ರಿಲ್ 20ರಿಂದ ಲಾಕ್ ಡೌನ್ ನಿಂದ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ, ಸಹಕಾರಿ ಕ್ರೆಡಿಟ್ ಸೊಸೈಟಿಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ವಿನಾಯ್ತಿ ನೀಡುವುದಾಗಿ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ.
ಏ.20ರ ಬಳಿಕ ಈ ನಾಲ್ಕು ವಲಯಗಳಿಗೆ ವಿನಾಯ್ತಿ: ಗೃಹ ಸಚಿವಾಲಯ ಆದೇಶದಲ್ಲಿ ಹೀಗಿದೆ

ನವದೆಹಲಿ: ಏಪ್ರಿಲ್ 20ರಿಂದ ಲಾಕ್ ಡೌನ್ ನಿಂದ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ, ಸಹಕಾರಿ ಕ್ರೆಡಿಟ್ ಸೊಸೈಟಿಗಳಿಗೆ ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ಮಾಡಲು ವಿನಾಯ್ತಿ ನೀಡುವುದಾಗಿ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ.

ನೀರು ಪೂರೈಕೆ ಮತ್ತು ಶುಚಿತ್ವ, ವಿದ್ಯುತ್ ಪ್ರಸರಣ ವಾಹಕಗಳ ಕೆಲಸ, ಟೆಲಿಕಾಂ ಆಪ್ಟಿಕಲ್ ಫೈಬರ್ ಮತ್ತು ಕೇಬಲ್, ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಕಾಮಗಾರಿಗಳಿಗೆ ವಿನಾಯ್ತಿ ನೀಡಲಾಗುತ್ತದೆ.

ಸಣ್ಣ ಅರಣ್ಯ ಉತ್ಪನ್ನಗಳ ಸಂಗ್ರಹ, ಬೆಳೆ ಮತ್ತು ಸಂಸ್ಕರಣೆ, ಅರಣ್ಯ ಚಟುವಟಿಕೆಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಚಟುವಟಿಕೆಗಳಿಗೆ ಸಹ ವಿನಾಯ್ತಿ ನೀಡಲಾಗುತ್ತದೆ. ಬಿದಿರು, ತೆಂಗಿನಕಾಯಿ, ಅಡಿಕೆ, ಕೊಕ್ಕೊ, ಮಸಾಲೆ ಪದಾರ್ಥ ಬೆಳೆಗಳನ್ನು ಬೆಳೆಯುವುದು, ಸಂಸ್ಕರಣೆ, ಪ್ಯಾಕೆಜಿಂಗ್, ಮಾರಾಟ ಮತ್ತು ಮಾರುಕಟ್ಟೆಗೆ ವಿನಾಯ್ತಿ ನೀಡಲಾಗುತ್ತದೆ.

ಹೌಸಿಂಗ್ ಫೈನಾನ್ಸ್ ಕಂಪೆನಿಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳನ್ನು ಸಹ ಅಗತ್ಯ ಸಿಬ್ಬಂದಿಗಳ ನೆರವಿನೊಂದಿಗೆ ಕಾರ್ಯಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ. ತಡೆರಹಿತ ವಲಯಗಳಲ್ಲಿ ಏಪ್ರಿಲ್ 20ರಿಂದ ಈ ಚಟುವಟಿಕೆಗಳಿಗೆ ಅನುವು ಮಾಡಿಕೊಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com