ಇತಿಹಾಸದಲ್ಲಿ ಇದು ಹೊಸ ಯುಗಾರಂಭದ ಕ್ಷಣ: ರಾಮ ಮಂದಿರ ಭೂಮಿ ಪೂಜೆ ಬಗ್ಗೆ ಮಾತಾ ಅಮೃತಾನಂದಮಯಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶ-ವಿದೇಶಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. 
ಮಾತಾ ಅಮೃತಾನಂದಮಯಿ
ಮಾತಾ ಅಮೃತಾನಂದಮಯಿ
Updated on

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶ-ವಿದೇಶಗಳಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. 

ಗಣ್ಯ ವ್ಯಕ್ತಿಗಳು ಭೂಮಿ ಪೂಜೆಯ ಮುನ್ನಾ ದಿನ ತಮ್ಮ ಅಭಿಪ್ರಾಯ- ಶುಭಕೋರುವ ಸಂದೇಶಗಳನ್ನು ನೀಡುತ್ತಿದ್ದು, ಮಾತಾ ಅಮೃತಾನಂದಮಯಿ ಅವರೂ ಭೂಮಿ ಪೂಜೆಯ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ.

"ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿರುವುದು ಇತಿಹಾಸದಲ್ಲಿ ಹೊಸ ಯುಗವೊಂದರ ಆರಂಭದ ಕ್ಷಣ. ಈ ಕ್ಷಣ ಯಾರ ಗೆಲುವೂ ಅಲ್ಲ ಯಾರ ಸೋಲೂ ಅಲ್ಲ. ಬದಲಾಗಿ ಪರಸ್ಪರ ಪ್ರೀತಿಯ, ತಾಳ್ಮೆಯ, ವಿಶಾಲ ಮನೋಭಾವದ ಗೆಲುವಾಗಿದೆ. 

ಈ ಸದ್ಗುಣಗಳು ಶಾಶ್ವತವಾಗಿರಲಿ ಎಂದು ದೈವಿಕ ಅನುಗ್ರಹ ಎಲ್ಲರಿಗೂ ಆಶೀರ್ವದಿಸಲಿ ಎಂದು ಮಾತಾ ಅಮೃತಾನಂದಮಯಿ ಪ್ರಾರ್ಥಿಸಿ, ಶುಭಕೋರಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com