ಕೇಜ್ರೀವಾಲ್ ಭಯೋತ್ಪಾಕನಲ್ಲ, ರಾಷ್ಟ್ರೀಯವಾದಿ ಎಂದು ದೆಹಲಿ ಸಾಬೀತುಪಡಿಸಿದೆ: ಸಂಜಯ್ ಸಿಂಗ್

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಸಂಸದ ಹಾಗೂ ಪಕ್ಷದ ದೆಹಲಿ ಉಸ್ತುವಾರಿ ಸಂಜಯ್ ಸಿಂಗ್, ದೆಹಲಿಯ ಜನರು ಅರವಿಂದ ಕೇಜ್ರೀವಾಲ್ ಭಯೋತ್ಪಾದಕನಲ್ಲ ಬದಲಿಗೆ...
ಸಂಜಯ್ ಸಿಂಗ್
ಸಂಜಯ್ ಸಿಂಗ್

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಸಂಸದ ಹಾಗೂ ಪಕ್ಷದ ದೆಹಲಿ ಉಸ್ತುವಾರಿ ಸಂಜಯ್ ಸಿಂಗ್, ದೆಹಲಿಯ ಜನರು ಅರವಿಂದ ಕೇಜ್ರೀವಾಲ್ ಭಯೋತ್ಪಾದಕನಲ್ಲ ಬದಲಿಗೆ, ರಾಷ್ಟ್ರೀಯವಾದಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಂಗ್, ದೆಹಲಿಯ 2 ಕೋಟಿ ಜನರು ಕೇಜ್ರೀವಾಲ್ ಅವರ ಆಡಳಿತವನ್ನು ಒಪ್ಪಿಕೊಂಡಿದೆ. ಅವರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ. 

70 ವಿಧಾನಸಭಾ ಕ್ಷೇತ್ರಗಳ ಪೈಕಿ ಆಡಳಿತಾರೂಢ ಎಎಪಿ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 12 ಸ್ಥಾನಗಳಲ್ಲಿ ಮುಂದಿದ್ದರೆ ಕಾಂಗ್ರೆಸ್ ಶೂನ್ಯ ಸಂಪಾದನೆ ದಾಖಲಿಸಿದೆ. 

ಮುಖ್ಯಮಂತ್ರಿ ಕೇಜ್ರೀವಾಲ್ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಸುನೀಲ್ ಕುಮಾರ್ ಯಾದವ್ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com