ಕೊರೋನಾ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಗ್ರಾಮೀಣ ಭಾಗಗಳ ಕೊಡುಗೆಯೇ ಕಾರಣ: ವರದಿ

ಕೊರೋನಾ ಸಾಂಕ್ರಾಮಿಕವು ಗ್ರಾಮೀಣ ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ದೇಶದ ಮುಂದೆ ತೆರೆದಿಟ್ಟಿದೆ.ಅಲ್ಲಿ ಕೋವಿಡ್ -19 ರ ಬಿಕ್ಕಟ್ಟು ಹೆಚ್ಚಾಗಿದ್ದು ಮೇ ತಿಂಗಳಲ್ಲಿ, ಗ್ರಾಮೀಣ ಭಾರತದ ಆರು ಜಿಲ್ಲೆಗಳು ಕೋವಿಡ್ -19 ರ ಕಾರಣದಿಂದಾಗಿ ಶೇಕಡಾ 52 ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ಸಾಂಕ್ರಾಮಿಕವು ಗ್ರಾಮೀಣ ಭಾರತದಲ್ಲಿನ ಆರೋಗ್ಯ ವ್ಯವಸ್ಥೆಯನ್ನು ದೇಶದ ಮುಂದೆ ತೆರೆದಿಟ್ಟಿದೆ.ಅಲ್ಲಿ ಕೋವಿಡ್ -19 ರ ಬಿಕ್ಕಟ್ಟು ಹೆಚ್ಚಾಗಿದ್ದು ಮೇ ತಿಂಗಳಲ್ಲಿ, ಗ್ರಾಮೀಣ ಭಾರತದ ಆರು ಜಿಲ್ಲೆಗಳು ಕೋವಿಡ್ -19 ರ ಕಾರಣದಿಂದಾಗಿ ಶೇಕಡಾ 52 ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗಿವೆ ಮತ್ತು ಎಲ್ಲಾ ಹೊಸ ಸೋಂಕಿತ ಪ್ರಕರಣಗಳ ಪೈಕಿ 53 ಶೇಕಡಾ. ಇದೇ ಭಾಗದಲ್ಲಿ ಕಾಣಿಸಿದೆ.

"ನಗರ ಭಾರತದಲ್ಲಿ ಸನ್ನದ್ಧತೆಯ ಕುರಿತ ಅಜಾಗರೂಕತೆ ಬೆಳಕಿಗೆ ಬಂದಿದ್ದರೂ ಗ್ರಾಮೀಣ ಒಳನಾಡಿನಿಂದ ಹೆಚ್ಚು ಗಂಭೀರ ಸನ್ನಿವೇಶವು ಹೊರಹೊಮ್ಮುತ್ತಿದೆ" ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ(Centre for Science and Environment)ವು ಬಿಡುಗಡೆ ಮಾಡಿದ ಹೊಸ ಸಂಖ್ಯಾಶಾಸ್ತ್ರೀಯ ವರದಿ ಹೇಳುತ್ತದೆ.

ಪ್ರಾಥಮಿಕ ಆರೋಗ್ಯ ಸೇವೆಯಲ್ಲಿ ಆರೋಗ್ಯ ವೃತ್ತಿಪರರ ಗಂಭೀರ ಕೊರತೆಯನ್ನು ಒತ್ತಿಹೇಳುವ ವರದಿ ಗ್ರಾಮೀಣ ಭಾರತದ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಶೇಕಡಾ 76 ರಷ್ಟು ಹೆಚ್ಚಿನ ವೈದ್ಯರು, 56 ಶೇಕಡಾ ಹೆಚ್ಚು ರೇಡಿಯೋಗ್ರಾಫರ್‌ಗಳು ಮತ್ತು 35 ಪ್ರತಿಶತ ಹೆಚ್ಚು ಲ್ಯಾಬ್ ತಂತ್ರಜ್ಞರು ಬೇಕಾಗಿದ್ದಾರೆ ಎಂದಿದೆ.

"ಈ ವರ್ಷದ ಮೇ ತಿಂಗಳಲ್ಲಿ, ಭಾರತ ಆರು ದಿನಗಳಲ್ಲಿ ದೈನಂದಿನ ಜಾಗತಿಕ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿತ್ತು.ಗ್ರಾಮೀಣ ಜಿಲ್ಲೆಗಳಲ್ಲಿನ ಪ್ರಕರಣಗಳ ಹೆಚ್ಚಳದಿಂದಾಗಿ ಈ ಉತ್ತುಂಗ ತಲುಪಿದೆ." ರಿಚರ್ಡ್ ಮಹಾಪಾತ್ರ ಹೇಳಿದರು.

ಗ್ರಾಮೀಣ ಭಾರತದಲ್ಲಿ ಮರಣ ಪ್ರಮಾಣ ವರ್ಷಕ್ಕೆ 1,000 ಜನಸಂಖ್ಯೆಗೆ 7 ಎಂದು ಸಾರ್ವಜನಿಕ ನೀತಿ ತಜ್ಞ ಡಾ.ಚಂದ್ರಕಾಂತ್ ಲಹರಿಯಾ ಹೇಳುತ್ತಾರೆ. ಇದರರ್ಥ ಸಾವಿರ ಜನರಿರುವ ಹಳ್ಳಿಯಲ್ಲಿ, ಪ್ರತಿ ಎರಡು ತಿಂಗಳಿಗೊಮ್ಮೆ ಒಂದು ಸಾವು ಸಂಭವಿಸುತ್ತದೆ ಎಂದು ಅವರು ಹೇಳುತ್ತಾರೆ.

"ಏಪ್ರಿಲ್-ಮೇ ತಿಂಗಳಲ್ಲಿ, [ಅಂತಹ ಹಳ್ಳಿಗಳಲ್ಲಿ] ಒಂದಕ್ಕಿಂತ ಹೆಚ್ಚು ಸಾವುಗಳು ಸಂಭವಿಸಿದ್ದರೆ, ಅದು ಹೆಚ್ಚಿನ ಮರಣಪ್ರಮಾಣವಾಗಿದೆ ಮೂರು ಅಥವಾ ನಾಲ್ಕು ಸಾವುಗಳು ಸಂಭವಿಸಿದ ಅನೇಕ ಗ್ರಾಮಗಳು ನಮಗೆ ತಿಳಿದಿವೆ. ಇದು ಅಧಿಕೃತ ಮರಣಕ್ಕಿಂತ ಹೆಚ್ಚಿನ ಸಾವುಗಳಿಗೆ ಕೋವಿಡ್ ಕಾರಣವಾಗಿದೆ" ಎಂದು ಡಾ ಲಹರಿಯಾ ಹೇಳುತ್ತಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com