ಮೀಟೂ: ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ವಾಪಸ್ ನೀಡಿದ ಗೀತರಚನೆಕಾರ ವೈರಮುತ್ತು 

ಖ್ಯಾತ ತಮಿಳು ಗೀತರಚನೆಕಾರ ವೈರಮುತ್ತು ಮೀಟೂ ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ಒಎನ್ ವಿ ಕುರುಪ್ ಸಾಹಿತ್ಯ ಬಹುಮಾನವನ್ನು ವಾಪಸ್ ನೀಡಿದ್ದಾರೆ. 
ಗೀತರಚನೆಕಾರ ವೈರಮುತ್ತು
ಗೀತರಚನೆಕಾರ ವೈರಮುತ್ತು
Updated on

ಚೆನ್ನೈ: ಖ್ಯಾತ ತಮಿಳು ಗೀತರಚನೆಕಾರ ವೈರಮುತ್ತು ಮೀಟೂ ಪ್ರತಿಭಟನೆಯ ಪರಿಣಾಮ ಸಾಹಿತ್ಯ ಪ್ರಶಸ್ತಿಯನ್ನು ಒಎನ್ ವಿ ಕುರುಪ್ ಸಾಹಿತ್ಯ ಬಹುಮಾನವನ್ನು ವಾಪಸ್ ನೀಡಿದ್ದಾರೆ. 

ಗೀತರಚನೆಕಾರ ವೈರಮುತ್ತು ವಿರುದ್ಧ ಮೀಟೂ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈರಮುತ್ತು ಪ್ರಶಸ್ತಿ ತೀರ್ಪುಗಾರರಿಗೆ ಅವಮಾನವಾಗದಂತೆ ಮಾಡುವುದಕ್ಕೆ ತಾವು ಈ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ. 

ಇದೇ ವೇಳೆ, ಒಎನ್ ವಿ ಕಲ್ಚರಲ್ ಅಕಾಡೆಮಿ ಪ್ರಶಸ್ತಿ ನೀಡುವುದನ್ನು ಮರುಪರಿಶೀಲನೆ ಮಾಡುವ ನಿರ್ಧಾರದ ಹಿಂದೆ ಹಗೆತನವನ್ನು ದೂಷಿಸಿದ್ದಾರೆ. ಇದೇ ವೇಳೆ ಅಕಾಡೆಮಿಯಿಂದ ಘೋಷಣೆ ಮಾಡಲಾಗಿರುವ 3 ಲಕ್ಷ ಬಹುಮಾನದ ಹಣವನ್ನು ಕೇರಳ ಸಿಎಂ ಪಬ್ಲಿಕ್ ರಿಲೀಫ್ ಫಂಡ್ ಗೆ ನೀಡುವಂತೆ ವೈರಮುತ್ತು ಮನವಿ ಮಾಡಿದ್ದು ತಾವೂ ಸಹ 2 ಲಕ್ಷ ರೂಪಾಯಿಗಳನ್ನು ಇದೇ ಕಾರಣಕ್ಕೆ ನೀಡುವುದಾಗಿ ಹೇಳುತ್ತಿದ್ದಾರೆ.

ವಿದ್ವಾಂಸ ತೀರ್ಪುಗಾರರಿಗೆ ನನ್ನ ವಿರುದ್ಧದ ಪ್ರತಿಭಟನೆಯಿಂದ ಮುಜುಗರವಾಗಬಾರದು, ಆದ್ದರಿಂದ ಪ್ರಶಸ್ತಿಯನ್ನು ವಾಪಸ್ ನೀಡುವ ನಿರ್ಧಾರ ಪ್ರಕಟಿಸುತ್ತಿದ್ದೇನೆ, ಆದ್ದರಿಂದ ವಿವಾದದ ನಡುವೆ ಪ್ರಶಸ್ತಿಯನ್ನು ಸ್ವೀಕರಿಸುವುದನ್ನು ತಪ್ಪಿಸುತ್ತಿದ್ದೇನೆ ಎಂದು ವೈರಮುತ್ತು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com