ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ: ಭದ್ರತಾ ಉಸ್ತುವಾರಿ

ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ ಎಂದು ಕುಂಭ ಮೇಳದ ಭದ್ರತಾ ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ. 
ಹರಿದ್ವಾರ ಕುಂಭಮೇಳ (ಸಂಗ್ರಹ ಚಿತ್ರ)
ಹರಿದ್ವಾರ ಕುಂಭಮೇಳ (ಸಂಗ್ರಹ ಚಿತ್ರ)
Updated on

ಡೆಹ್ರಾಡೂನ್: ಹರಿದ್ವಾರ ಕುಂಭಮೇಳವನ್ನು ಕೋವಿಡ್-19 ಸೂಪರ್ ಸ್ಪ್ರೆಡರ್ ಎನ್ನುವುದು ಸೂಕ್ತವಲ್ಲ ಎಂದು ಕುಂಭ ಮೇಳದ ಭದ್ರತಾ ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ. 

ಒಟ್ಟಾರೆ ಆರ್ ಟಿ-ಪಿಸಿಆರ್ ಪರೀಕ್ಷೆ ಪೈಕಿ ಶೇ.೦.2  ರಷ್ಟು ಮಾತ್ರ ಕೋವಿಡ್-19 ಸೋಂಕು ದೃಢಪಟ್ಟಿದೆ. ಪರೀಕ್ಷೆಗೆ ಒಳಪಟ್ಟ ಪೊಲೀಸ್ ಸಿಬ್ಬಂದಿಗಳ ಪೈಕಿ ಶೇ.೦5 ರಷ್ಟು ಮಂದಿಗೆ ಮಾತ್ರ ಸೋಂಕು ದೃಢಪಟ್ಟಿದೆ ಆದ್ದರಿಂದ ಕೋವಿಡ್-19 ನ್ನು ಸೂಪರ್ ಸ್ಪ್ರೆಡರ್ ಎನ್ನುವುದು ಸರಿಯಲ್ಲ ಎಂದು ಹೇಳಿದ್ದಾರೆ. 

ಮೇಳ ಐಜಿ ಸಂಜಯ್ ಗುಂಜ್ಯಾಲ್ ಈ ಬಗ್ಗೆ ಮಾತನಾಡಿದ್ದು ಏ.01 ರಿಂದ ಕುಂಭ ಮೇಳ ಅಧಿಕೃತವಾಗಿ ಪ್ರಾರಂಭವಾಯಿತು, ಆ ವೇಳೆಗೆ ಆಗಲೇ ಎರಡನೇ ಅಲೆ ಮಹಾರಾಷ್ಟ್ರ, ಹರ್ಯಾಣಗಳಲ್ಲಿ ತೀವ್ರವಾಗಿ ಪ್ರಾರಂಭವಾಗಿತ್ತು. ಜನವರಿ 1-ಏಪ್ರಿಲ್ 30 ವರೆಗಿನ ಹರಿದ್ವಾರ ಜಿಲ್ಲೆಯ ಕೋವಿಡ್-19 ಕೋವಿಡ್ ಡೇಟಾವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದರೆ, ಕುಂಭಮೇಳವನ್ನು ಸೂಪರ್ ಸ್ಪ್ರೆಡರ್ ಎಂದು ಹೇಳುವುದು ಸರಿಯಲ್ಲ ಎಂದು ಗುಂಜ್ಯಾಲ್ ಹೇಳಿದ್ದಾರೆ. 

ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಜ.1 ರಿಂದ ಏಪ್ರಿಲ್.30 8.91 ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಗಿತ್ತು. ಈ ಪೈಕಿ 1,945  ಪ್ರಕರಾಣಗಳಲ್ಲಿ ಸೋಂಕು ದೃಢಪಟ್ಟಿವೆ. 

ಕುಂಭಮೇಳದ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ 16,000 ಪೊಲೀಸ್ ಸಿಬ್ಬಂದಿಗಳ ಪೈಕಿ ಕೇವಲ 88 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಈ ಸಿಬ್ಬಂದಿಗಳು ಜನಸಂದಣಿಯೊಂದಿಗೆ ನೇರವಾಗಿ ವ್ಯವಹರಿಸುತ್ತಿದ್ದರು ಎಂಬುದು ಮತ್ತೊಂದು ಗಮಾರ್ಹ ಅಂಶ ಹೀಗಿದ್ದರೂ ಸಹ ಅತ್ಯಂತ ಕಡಿಮೆ ಮಂದಿ ಸಿಬ್ಬಂದಿ ಎಂದು ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com