ಹರ್ಯಾಣದ ಟಿಕ್ರಿ ಗಡಿಭಾಗದಲ್ಲಿ ಭೀಕರ ಅಪಘಾತ: ಮೂವರು ರೈತ ಮಹಿಳೆಯರು ಸಾವು, ಇಬ್ಬರಿಗೆ ಗಾಯ 

ಹರ್ಯಾಣ ರಾಜ್ಯದ ಬಹದುರ್ಗರ್ ನ ಟಿಕ್ರಿ ಗಡಿಭಾಗದಲ್ಲಿ ಗುರುವಾರ ನಸುಕಿನ ಜಾವ ಟ್ರಕ್ ಢಿಕ್ಕಿ ಹೊಡೆದು ಮೂವರು ರೈತ ಮಹಿಳೆಯರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಡಿಕ್ಕಿ ಹೊಡೆದ ಟ್ರಕ್
ಡಿಕ್ಕಿ ಹೊಡೆದ ಟ್ರಕ್

ಬಹದುರ್ಗರ್: ಹರ್ಯಾಣ ರಾಜ್ಯದ ಬಹದುರ್ಗರ್ ನ ಟಿಕ್ರಿ ಗಡಿಭಾಗದಲ್ಲಿ ಗುರುವಾರ ನಸುಕಿನ ಜಾವ ಟ್ರಕ್ ಢಿಕ್ಕಿ ಹೊಡೆದು ಮೂವರು ರೈತ ಮಹಿಳೆಯರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ರೈತ ಮಹಿಳೆಯರು ಆಟೋರಿಕ್ಷಾಕ್ಕೆ ಬಹದುರ್ಗರ್ ರೈಲ್ವೆ ನಿಲ್ದಾಣಕ್ಕೆ ಹೋಗಲು ಕಾಯುತ್ತಿದ್ದ ವೇಳೆ ಪಕೊಡಾ ಚೌಕ್ ನಲ್ಲಿ ಈ ಅಪಘಾತ ನಡೆದಿದೆ. 

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಟಿಕ್ರಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸಿ ರೈತ ಮಹಿಳೆಯರು ತಮ್ಮ ಊರಿಗೆ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. 

ಮೃತಪಟ್ಟವರನ್ನು 60 ವರ್ಷದ ಛಿಂದರ್ ಕೌರ್, 58 ವರ್ಷದ ಅಮರ್ಜೀತ್ ಕೌರ್ ಮತ್ತು 60 ವರ್ಷದ ಗುರ್ಮೈಲ್ ಕೌರ್ ಎಂದು ಗುರುತಿಸಲಾಗಿದೆ. ಇವರು ಪಂಜಾಬ್ ನ ಮಾನ್ಸ ಜಿಲ್ಲೆಯ ದ್ಯಾಲುವಾಲ ಗ್ರಾಮಕ್ಕೆ ಸೇರಿದವರಾಗಿದ್ದಾರೆ. 

ಗಾಯಗೊಂಡವರನ್ನು ಕೂಡಲೇ ಪಿಜಿಐ ರೊಹ್ಟಕ್ ಕೆ ದಾಖಲಿಸಲಾಗಿದೆ. ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಕೂಡ ಭಾಗವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com