ಇವರೇ ಪಂಜಾಬ್ ನ ಮುಂದಿನ ಮುಖ್ಯಮಂತ್ರಿ, ಕಾರಣ ಏನು ಗೊತ್ತಾ?

ಪಂಜಾಬ್ ನಲ್ಲಿ ರಾಜಕೀಯ ಕಾವು ತೀವ್ರಗೊಂಡಿದೆ. ಸ್ವಂತ ಪಕ್ಷದ ಶಾಸಕರೇ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್ ಸಿಂಗ್ ವಿರುದ್ಧ ತಿರುಗಿ ಬಿದ್ದ ಕಾರಣ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿದೆ.
ಸುನಿಲ್ ಜಾಖರ್‌
ಸುನಿಲ್ ಜಾಖರ್‌
Updated on

ಚಂಡೀಗಢ: ಪಂಜಾಬ್ ನಲ್ಲಿ ರಾಜಕೀಯ ಕಾವು ತೀವ್ರಗೊಂಡಿದೆ. ಸ್ವಂತ ಪಕ್ಷದ ಶಾಸಕರೇ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್ ಸಿಂಗ್ ವಿರುದ್ಧ ತಿರುಗಿ ಬಿದ್ದ ಕಾರಣ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ಈ ವರ್ಷ ವಿಧಾನಸಭಾ ಚುನಾವಣೆ ಎದುರಾಗುವ ಕಾರಣ ಮುಖ್ಯಮಂತ್ರಿ ಬದಲಾವಣೆ ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಅಮರೀಂದರ್ ಶನಿವಾರ ಸಂಜೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಈಗ ಪಂಜಾಬ್ ನ ಹೊಸ ಮುಖ್ಯಮಂತ್ರಿ ಯಾರು? ಎಂಬ ವಿಷಯ ಮುನ್ನೆಲೆಗೆ ಬಂದಿದೆ. 

ಮುಂದಿನ ವರ್ಷ ವಿಧಾನಸಭೆ ಚುನಾವಣೆ ಬರಲಿದ್ದು, ಕಾಂಗ್ರೆಸ್ ಪಕ್ಷ ಯಾರಿಗೆ ಮುಖ್ಯಮಂತ್ರಿ ಗದ್ದುಗೆ ನೀಡಬೇಕು ಎಂಬುದನ್ನು ಅಳೆದು ತೂಗಿ ಮುಂದಿನ ಹೆಜ್ಜೆ ಇರಿಸಲು ಮುಂದಾಗಿದೆ. ಆದರೆ, ಈಗ ಹೊಸ ಹೆಸರು ತೆರೆಯ ಮೇಲೆ ಕಾಣಿಸಿಕೊಂಡಿದೆ. ಅವರೇ ಮುಂದಿನ ಮುಖ್ಯಮಂತ್ರಿ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿದೆ. ಅಷ್ಟಕ್ಕೂ ಅವರು ಯಾರೆಂದರೆ? ಪಂಜಾಬ್ ಪಿಸಿಸಿ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್‌. ಹೌದು. ನವಜ್ಯೋತ್‌ ಸಿಂಗ್‌ ಸಿದು ಅವರಲ್ಲ ... ಸುನಿಲ್‌ ಜಾಖರ್‌ ಅವರೇ ಮುಖ್ಯಮಂತ್ರಿ ಹುದ್ದೆಗೆ ಏರಲಿದ್ದಾರೆ ಎಂಬುದು ನಂಬಲರ್ಹ ಮಾಹಿತಿ.

ಸಿಕ್‌ ಯೇತರ ವ್ಯಕ್ತಿಗೆ ಸಿ ಎಂ ಹುದ್ದೆ
ವರ್ಷದಲ್ಲಿ ಚುನಾವಣೆ ಎದುರಾಗಲಿದೆ. ಮತ್ತೊಂದೆಡೆ, ಪಂಜಾಬ್ ನಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ, ಆಮ್ ಆದ್ಮಿ ಪಕ್ಷ ಆಳವಾಗಿ ತನ್ನ ಬೇರುಗಳನ್ನ ಇಳಿಸುತ್ತಿದೆ. ಬಲಿಷ್ಟಗೊಳ್ಳುತ್ತಿದೆ. ಇದರಿಂದ ಪಿಸಿಸಿ ಮುಖ್ಯಸ್ಥ, ಮುಖ್ಯಮಂತ್ರಿ ಹುದ್ದೆಯನ್ನು ಒಂದೇ ವರ್ಗಕ್ಕೆ ನೀಡುವ ಬದಲು ಎರಡು ವರ್ಗಗಳಿಗೆ ಹಂಚಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಅದರ ಭಾಗವಾಗಿ, ನವಜೋತ್ ಸಿಂಗ್ ಸಿಧು ಅವರಿಗೆ ಪಿಸಿಸಿ ಮುಖ್ಯಸ್ಥ ಹುದ್ದೆ ನೀಡಲಾಗಿದೆ. ಇನ್ನೂ ಸಿಎಂ ಹುದ್ದೆಯನ್ನು ಸಿಖ್ ಅಲ್ಲದ ವ್ಯಕ್ತಿಗೆ ನೀಡಲು ಯೋಜಿಸಲಾಗಿದೆ. ಇದರ ಭಾಗವಾಗಿ ಸುನಿಲ್ ಜಾಖರ್ ಹೆಸರು ತೆರೆಯ ಮೇಲೆ ಕಾಣಿಸಿಕೊಂಡಿದೆ. ಸುನಿಲ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ವೇಗ ಪಡೆದುಕೊಂಡಿದೆ.

ಯಾರು ಈ ಸುನಿಲ್‌ ಜಾಖರ್‌?
67 ವರ್ಷದ ಸುನಿಲ್ ಜಾಖರ್ ಪಂಜಾಬ್ ಕಾಂಗ್ರೆಸ್ ಸಮಿತಿ ಮಾಜಿ ಮುಖ್ಯಸ್ಥ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಬೋಹರ್ ಕ್ಷೇತ್ರದಿಂದ ಜಾಖರ್‌ ಸತತವಾಗಿ(2002-2017) ಆಯ್ಕೆಯಾಗಿದ್ದಾರೆ. ಅವರು 2012 ರಿಂದ 2015 ರವರೆಗೆ ಪಂಜಾಬ್ ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕರಾಗಿದ್ದರು.
2017 ರಲ್ಲಿ ನಡೆದ ಗುರುದಾಸಪುರ ಲೋಕಸಭಾ ಉಪಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ್ದರು. ಆದರೆ, 2019 ರಲ್ಲಿ ಅದೇ ಕ್ಷೇತ್ರದಿಂದ ಬಾಲಿವುಡ್‌ ನಟ ಸನ್ನಿ ಡಿಯೋಲ್ ಎದುರು ಪರಾಭವಗೊಂಡಿದ್ದರು. ಸೋಲಿನ ನೈತಿಕ ಹೊಣೆ ಹೊತ್ತು ಸುನೀಲ್ ಜಾಖರ್‌ ಪಿಸಿಸಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದ 13 ಸ್ಥಾನಗಳಲ್ಲಿ 8 ಸಂಸದ ಸ್ಥಾನಗಳನ್ನು ಗೆದ್ದರೂ ಅವರು ರಾಜೀನಾಮೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com