ಕಾಶ್ಮೀರಿ ಪಂಡಿತರಿಗೆ ಸೇರಿದ್ದ 9 ಆಸ್ತಿಗಳು ಮಾಲಿಕರಿಗೆ ಹಸ್ತಾಂತರ

ಭಯೋತ್ಪಾದಕರ ದಾಳಿಯಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾಶ್ಮೀರ  ಪಂಡಿತರಿಗೆ ಸೇರಿದ್ದ 9 ಆಸ್ತಿಗಳನ್ನು ಮೂಲ ಮಾಲಿಕರಿಗೆ ಹಸ್ತಾಂತರ ಮಾಡಲಾಗಿದೆ. 
ತಮ್ಮ ಜಾಗವನ್ನು ವಾಪಸ್ ಪಡೆದ ಪ್ರದೇಶದಲ್ಲಿ ಭೂಮಿಪೂಜೆ ನಡೆಸುತ್ತಿರುವ ಕಾಶ್ಮೀರಿ ಪಂಡಿತರು
ತಮ್ಮ ಜಾಗವನ್ನು ವಾಪಸ್ ಪಡೆದ ಪ್ರದೇಶದಲ್ಲಿ ಭೂಮಿಪೂಜೆ ನಡೆಸುತ್ತಿರುವ ಕಾಶ್ಮೀರಿ ಪಂಡಿತರು

ಶ್ರೀನಗರ: ಭಯೋತ್ಪಾದಕರ ದಾಳಿಯಿಂದ ಬೇರೆಡೆಗೆ ವಲಸೆ ಹೋಗಿದ್ದ ಕಾಶ್ಮೀರ ಪಂಡಿತರಿಗೆ ಸೇರಿದ್ದ 9 ಆಸ್ತಿಗಳನ್ನು ಮೂಲ ಮಾಲಿಕರಿಗೆ ಹಸ್ತಾಂತರ ಮಾಡಲಾಗಿದೆ. 
 
ಕಾಶ್ಮೀರದಿಂದ ವಲಸೆ ತೆರಳಿದ್ದ ಹಿಂದೂಗಳನ್ನು ಮರಳಿ ಅವರ ತವರು ಪ್ರದೇಶಕ್ಕೆ ಕರೆತರಲು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ. 

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಈ ಮಾಹಿತಿ ನೀಡಿದ್ದು, ಜಮ್ಮು-ಕಾಶ್ಮೀರ ವಲಸೆ ಸ್ಥಿರ ಆಸ್ತಿ (ಸಂರಕ್ಷಣೆ, ಸಂಕಷ್ಟದ ಮಾರಾಟದಿಂದ ರಕ್ಷಣೆ ಹಾಗೂ ನಿರ್ಬಂಧ) ಕಾಯ್ದೆ 1997, ಅಡಿಯಲ್ಲಿ ಜಮ್ಮು-ಕಾಶ್ಮೀರದ ಜಿಲ್ಲೆಗಳಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳು ವಲಸಿಗರ ಸ್ಥಿರಾಸ್ತಿಗೆ ಕಾನೂನಾತ್ಮಕವಾಗಿ ಪಾಲಕರಾಗಿದ್ದು, ಒತ್ತುವರಿ, ತೆರವು ಕಾರ್ಯಾಚರಣೆಯಲ್ಲಿ ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಲಿದ್ದಾರೆ. ಇಂತಹ ಪ್ರಕರನಗಳಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳನ್ನು ವಲಸೆ ಹೋದಿದ್ದವರು ಸಂಪರ್ಕಿಸಬಹುದಾಗಿದೆ. 

ಮೂಲ ಮಾಲಿಕರಿಗೆ ಇಂತಹ 9 ಆಸ್ತಿಗಳನ್ನು ವಾಪಸ್ ನೀಡಲಾಗಿದೆ ಎಂದು ಜಮ್ಮು-ಕಾಶ್ಮೀರ ಸರ್ಕಾರದ ಮಾಹಿತಿಯನ್ನು ಆಧರಿಸಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. ಆರ್ಟಿಕಲ್ 370 ರದ್ದು ನಂತರ ಈ ವರೆಗೂ 520 ವಲಸಿಗರು ತಮ್ಮ ತವರಿಗೆ ವಾಪಸ್ಸಾಗಿದ್ದು ಪ್ರಧಾನ ಮಂತ್ರಿ ಅಭಿವೃದ್ಧಿ ಪ್ಯಾಕೇಜ್-2015 ರ ಅಡಿಯಲ್ಲಿ ನೌಕರಿ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com