'ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್​ ಓವೈಸಿ ಜನಿವಾರ ಧರಿಸಿ ರಾಮನಾಮ ಜಪಿಸುತ್ತಾರೆ'

ಮುಂದಿನ ಅವಧಿಗೆ ಕೂಡ ಯೋಗಿ ಆದಿತ್ಯನಾಥ್​ ಸರ್ಕಾರ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಜನಿವಾರ ಧರಿಸಿ ಶ್ರೀರಾಮನಾಮ ಜಪ ಪ್ರಾರಂಭ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಪಂಚಾಯಿತಿ ರಾಜ್​ ಸಚಿವ ಭೂಪೇಂದ್ರ ಸಿಂಗ್​ ಚೌಧರಿ ಹೇಳಿದ್ದಾರೆ.  
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಶಾಮ್ಲಿ: ಉತ್ತರ ಪ್ರದೇಶದಲ್ಲಿ  ಮುಂದಿನ ಅವಧಿಗೆ ಕೂಡ ಯೋಗಿ ಆದಿತ್ಯನಾಥ್​ ಸರ್ಕಾರ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಜನಿವಾರ ಧರಿಸಿ ಶ್ರೀರಾಮನಾಮ ಜಪ ಪ್ರಾರಂಭ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಪಂಚಾಯಿತಿ ರಾಜ್​ ಸಚಿವ ಭೂಪೇಂದ್ರ ಸಿಂಗ್​ ಚೌಧರಿ ಹೇಳಿದ್ದಾರೆ.  

ರಾಹುಲ್ ಗಾಂಧಿ ಜನಿವಾರ ಧರಿಸಿದ್ದು, ಅಖಿಲೇಶ್​ ಯಾದವ್ ಹನುಮಾನ್​ ದೇಗುಲಕ್ಕೆ ಭೇಟಿ ಕೊಟ್ಟ ಘಟನೆಗಳ ಸಾಲಿಗೆ,  ಓವೈಸಿ ಜನಿವಾರ ಧರಿಸಿ, ರಾಮನಾಮ ಜಪಿಸುವುದೂ ಸೇರಲಿದೆ ಎಂದು ವ್ಯಂಗ್ಯವಾಡಿದ್ದಾರೆ.  

ಭೂಪೇಂದ್ರ ಸಿಂಗ್ ಚೌಧರಿ ಅವರು ಮೂಲತಃ ಮೊರಾದಾಬಾದ್​ನವರಾಗಿದ್ದು, ರಾಜ್ಯ ವಿಧಾನಪರಿಷತ್​ ಸದಸ್ಯರಾಗಿದ್ದಾರೆ. ಶಾಮ್ಲಿಯಲ್ಲಿ  ನಡೆದ ಯುವಜನರ ಸಮಾವೇಶದಲ್ಲಿ ಈ ಮಾತುಗಳನ್ನಾಡಿದ್ದಾರೆ.

ಖಂಡಿತವಾಗಿಯೂ ನಾನು ಹೇಳಿದ್ದು ಆಗಿಯೇ ಆಗುತ್ತದೆ ಎಂದಿದ್ದಾರೆ. ನಾವು ಬಿಜೆಪಿ ಅಜೆಂಡಾ ಮುಂದುವರಿಸುತ್ತೇವೆ. ನಮ್ಮ ಅಜೆಂಡಾದಿಂದಾಗಿಯೇ ಅಂದು ರಾಹುಲ್​ ಗಾಂಧಿ ಜನಿವಾರ ಹಾಕಿದ್ದು, ಅಖಿಲೇಶ್​ ಯಾದವ್​ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದು ಎಂದು ಸಚಿವರು ಹೇಳಿದ್ದಾರೆ.

ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವವರು ರಾಮನ ಅಸ್ತಿತ್ವವನ್ನೇ ಒಪ್ಪಿಕೊಳ್ಳದೆ, ಅವನನ್ನು ಕಾಲ್ಪನಿಕ ಎಂದವರೆಲ್ಲ ಈಗ ಜನಿವಾರ ಧರಿಸುತ್ತಿದ್ದಾರೆ.ದೇಗುಲಗಳಿಗೆ ಭೇಟಿ ಕೊಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್​ ವಿರುದ್ಧ ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com