ಭಾರತ-ಪಾಕಿಸ್ತಾನ ಹೊಸ ಅಧ್ಯಾಯಕ್ಕೆ ಮುಂದಾಗಲಿ; ವ್ಯಾಪಾರ ವಹಿವಾಟು ಮುಂದುವರೆಯಲಿ: ನವಜೋತ್ ಸಿಂಗ್ ಸಿಧು
ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ವಿಷಯವಾಗಿ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
Published: 20th November 2021 09:55 PM | Last Updated: 20th November 2021 09:55 PM | A+A A-

ನವಜೋತ್ ಸಿಂಗ್ ಸಿಧು
ಲಾಹೋರ್: ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ವಿಷಯವಾಗಿ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ.
ಕರ್ತಾರ್ ಪುರಕ್ಕೆ ಭೇಟಿ ನೀಡಿದ್ದ ಸಿಧು, ಬಾಬಾ ಗುರುನಾನಕ್ ಅವರ ಹೆಸರಿನಲ್ಲಿ ಹೊಸ ಸ್ನೇಹದ ಅಧ್ಯಾಯವೊಂದು ಪ್ರಾರಂಭವಾಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕರ್ತಾರ್ ಪುರ ಸಾಹಿಬ್ ಭೇಟಿ ವೇಳೆ ಇಮ್ರಾನ್ ನನ್ನ ದೊಡ್ಡಣ್ಣ ಎಂದ ಸಿಧು; ಬಿಜೆಪಿ ಕೆಂಡಾಮಂಡಲ
ಲಕ್ಷಾಂತರ ಮಂದಿ ಸಾವಿಗೆ ಕಾರಣವಾದ ವಿಶ್ವಯುದ್ಧದ ನಂತರ ಒಂದೇ ವೀಸಾ, ಒಂದೇ ಪಾಸ್ ಪೋರ್ಟ್, ಒಂದೇ ಕರೆನ್ಸಿಯಡಿ ಯುರೋಪ್ ಗಡಿಗಳನ್ನು ತೆರೆಯುತ್ತದೆ ಎಂದಾದರೆ, ಎಲ್ಲರೂ ಗೌರವಿಸುವ ಭಗತ್ ಸಿಂಗ್, ಮಹಾರಾಜ ರಂಜೀತ್ ಸಿಂಗ್ ಅವರುಗಳನ್ನು ಹೊಂದಿರುವ ನಾವೇಕೆ ಆ ರೀತಿ ಮಾಡಬಾರದು? ಎಂದು ಸಿಧು ಪ್ರಶ್ನಿಸಿದ್ದಾರೆ.
ತಾವು ಭಾರತ-ಪಾಕಿಸ್ತಾನದ ನಡುವೆ ಪರಸ್ಪರ ಪ್ರೀತಿ ಬಯಸುತ್ತಿರುವುದಾಗಿ ಹೇಳಿದ್ದಾರೆ. 74 ವರ್ಷಗಳಿಂದ ನಿರ್ಮಾಣ ಮಾಡಿರುವ ಗೋಡೆಗಳಿಗೆ ಕಿಟಕಿಗಳನ್ನು ತೆರೆಯುವ ಅಗತ್ಯವಿದೆ ಎಂದು ಸಿಧು ಹೇಳಿದ್ದು ಭಾರತ- ಪಾಕ್ ನಡುವೆ ; ವ್ಯಾಪಾರ ವಹಿವಾಟು ಮುಂದುವರೆಯಲಿ ಎಂದು ಆಶಿಸಿದ್ದಾರೆ.