ಪ್ರೀತಿ ತಿರಸ್ಕಾರ ಮಾಡಿದ ಯುವತಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಪ್ರಿಯತಮ!

ಪ್ರೀತಿ ತಿರಸ್ಕಾರ ಮಾಡಿದ ಯುವತಿ ಮೇಲೆ ಕೋಪ ತೀರಿಸಿಕೊಳ್ಳುವ ಉದ್ದೇಶದಿಂದ ಇಲ್ಲೋರ್ವ ಮಾಡಬಾರದ್ದನ್ನು ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.
ಬಂಧನ (ಸಾಂಕೇತಿಕ ಚಿತ್ರ)
ಬಂಧನ (ಸಾಂಕೇತಿಕ ಚಿತ್ರ)

ವಿಶಾಖಪಟ್ಟಣಂ: ಪ್ರೀತಿ ತಿರಸ್ಕಾರ ಮಾಡಿದ ಯುವತಿ ಮೇಲೆ ಕೋಪ ತೀರಿಸಿಕೊಳ್ಳುವ ಉದ್ದೇಶದಿಂದ ಇಲ್ಲೋರ್ವ ಮಾಡಬಾರದ್ದನ್ನು ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ತನ್ನ ಪ್ರೇಯಸಿಗೆ ಗಾಂಜಾ ಗಿಫ್ಟ್​​ ಆಗಿ ನೀಡಿ, ಕೊನೆಗೆ ತಾನೇ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ಈ ಜರುಗಿದೆ.

ವಿನಯ್​ ಕುಮಾರ್ (25) ಈ ಕೃತ್ಯ ಎಸಗಿದವ. ತಾನು ವ್ಯಾಸಂಗ ಮಾಡುತ್ತಿದ್ದ ವೇಳೆ ತನ್ನೊಂದಿಗೆ ವ್ಯಾಸಂಗ ಮಾಡಿದ್ದ ಹುಡುಗಿಯನ್ನೇ ಪ್ರೀತಿಸುತ್ತಿದ್ದನು. ಆಕೆಯ ಮುಂದೆ ತನ್ನ ಪ್ರೇಮ ನಿವೇದನೆ ಸಹ ಮಾಡಿಕೊಂಡಿದ್ದಾನೆ. ಈ ವೇಳೆ ಯುವತಿ ಪ್ರೇಮ ಪ್ರಸ್ತಾಪ ತಿರಸ್ಕಾರ ಮಾಡಿದ್ದಕ್ಕೆ ಆಕ್ರೋಶಗೊಂಡ ವಿನಯ್​ ಸೇಡು ತೀರಿಸಿಕೊಳ್ಳಲು ಆಲೋಚನೆ ಮಾಡಿದ್ದಾನೆ.

ಈತ ಮಾಡಿದ ಕುತಂತ್ರಿ ಬುದ್ಧಿ ಏನು?

ಯುವತಿ ತನ್ನ ಸ್ನೇಹಿತೆಯರ ಜೊತೆ ಸೇರಿ ಕಳೆದ ಮೇ ತಿಂಗಳಲ್ಲಿ ಶಿರಡಿ ಸಾಯಿ ಎಕ್ಸ್​​ಪ್ರೆಸ್​ ರೈಲಿನಲ್ಲಿ ಸಿಕಂದರಾಬಾದ್​ಗೆ ತೆರಳುತ್ತಿದ್ದಳು. ಈ ಮಾಹಿತಿ ಅರಿತ ವಿನಯ್​, ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾನೆ. ಸ್ನೇಹದ ಸಂಕೇತವಾಗಿ ಉಡುಗೊರೆವೊಂದನ್ನ ಆ ವೇಳೆ ನೀಡಿದ್ದಾನೆ. ಆದರೆ, ಅದರಲ್ಲಿ 3 ಕೆಜಿ ಗಾಂಜಾ ಇದೆ ಎಂಬುದು ಮಾತ್ರ ಅವಳಿಗೆ ಗೊತ್ತಾಗಿರಲಿಲ್ಲ.

ರೈಲು ಹೊರಡುತ್ತಿದ್ದಂತೆ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ ಆತ, ಗಾಂಜಾ ಸಾಗಾಣೆ ಮಾಡುತ್ತಿರುವ ಹುಡುಗಿ ಅದರಲ್ಲಿ ಪ್ರಯಾಣ ಬೆಳೆಸಿದ್ದಾಳೆ ಎಂದು ಹೇಳಿದ್ದಾನೆ. ರೈಲು ಸಿಕಂದರಾಬಾದ್​ ತಲುಪುತ್ತಿದ್ದಂತೆ ರೈಲ್ವೇ ಪೊಲೀಸರು ಆ ಹುಡುಗಿಯನ್ನ ಹಿಡಿದು ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಆ ವೇಳೆ ಯುವತಿ ನಡೆದಿದ್ದ ಘಟನೆ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com