ಅಕ್ಷಯ್ ಕುಮಾರ್ ಮುಂತಾದ ಬಾಲಿವುಡ್ ನಟರಿಗೆ ಸುಬ್ರಹ್ಮಣ್ಯಂ ಸ್ವಾಮಿ ಲೀಗಲ್ ನೊಟೀಸ್ 

ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಬಾಲಿವುಡ್ ನಟರಿಗೆ ಲೀಗಲ್ ನೊಟೀಸ್ ಜಾರಿಗೊಳಿಸಿದ್ದಾರೆ. 
ಸುಬ್ರಹ್ಮಣಿಯನ್ ಸ್ವಾಮಿ
ಸುಬ್ರಹ್ಮಣಿಯನ್ ಸ್ವಾಮಿ
Updated on

ನವದೆಹಲಿ: ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಬಾಲಿವುಡ್ ನಟರಿಗೆ ಲೀಗಲ್ ನೊಟೀಸ್ ಜಾರಿಗೊಳಿಸಿದ್ದಾರೆ. 

ರಾಮ್ ಸೇತು ಸಿನಿಮಾದಲ್ಲಿರುವ ಅಕ್ಷಯ್ ಕುಮಾರ್, ಜಾಕ್ವಲೀನ್ ಫರ್ನಾಂಡೀಸ್ ಹಾಗೂ ಇತರರಿಗೆ ಸ್ವಾಮಿ ಈ ನೊಟೀಸ್ ಜಾರಿಗೊಳಿಸಿದ್ದು, ಮುಂಬೈ ಸಿನಿಮಾ ವಾಲಾಗಳಿಗೆ ಸುಳ್ಳು ಮತ್ತು ದುರ್ಬಳಕೆಯ ಕೆಟ್ಟ ಅಭ್ಯಾಸವಿದೆ. ಆದ್ದರಿಂದ ಅವರಿಗೆ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ತಿಳಿಸುವುದಕ್ಕಾಗಿ ನಾನು ಸತ್ಯ ಸಭರ್ವಾಲ್ ಅಡ್ವೊಕೇಟ್ ಮೂಲಕ ಲೀಗಲ್ ನೊಟೀಸ್ ನ್ನು ರಾಮ ಸೇತು ಕಥೆಯನ್ನು ತಿರುಚಿದ ಅಕ್ಷಯ್ ಕುಮಾರ್ ಹಾಗೂ ಇನ್ನೂ 8 ಮಂದಿಗೆ ಜಾರಿಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ. 

ರಾಮಸೇತು ರಕ್ಷಣೆ ಹಾಗೂ ಸಂರಕ್ಷಣೆಗಾಗಿ ಹಾಗೂ ಅಂದಿನ ಕೇಂದ್ರ ಸರ್ಕಾರದ ಸೇತು ಸಮುದ್ರಮ್ ಯೋಜನೆಯನ್ನು ವಿರೋಧಿಸಿ ಸುಬ್ರಹ್ಮಣ್ಯಂ ಸ್ವಾಮಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ರಾಮ ಸೇತು ಒಡೆಯದಂತೆ ಆದೇಶ ನೀಡಿತ್ತು ಇದು  ನಂಬಿಕೆ ಮತ್ತು ಪೂಜೆಗೆ ಸಂಬಂಧಿಸಿದ ಆಧಾರದಲ್ಲಿ ಈ ತೀರ್ಪನ್ನು ನೀಡಲಾಗಿದೆ ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com