ಬಂಗಾಳಿ ವಿರೋಧಿ ಹೇಳಿಕೆ: ಪರೇಶ್ ರಾವಲ್ ವಿರುದ್ಧ ಕೇಸ್ ದಾಖಲು

ಬಂಗಾಳಿ ಸಮುದಾಯ ಮತ್ತಿತರ ಸಮುದಾಯದ ನಡುವಣ ಸೌಹಾರ್ದತೆ ಹಾಳು ಮತ್ತು ಹಿಂಸಾಚಾರ ಪ್ರಚೋದನೆ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ವಿರುದ್ಧ ಸಿಪಿಐ(ಎಂ) ಪೊಲೀಸ್ ದೂರು ದಾಖಲಿಸಿದೆ. ಸಿಪಿಐ-ಎಂ ಮುಖಂಡ ಎಂಡಿ ಸಲೀಂ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.
ಪರೇಶ್ ರಾವಲ್
ಪರೇಶ್ ರಾವಲ್

ಕೊಲ್ಕತ್ತಾ: ಬಂಗಾಳಿ ಸಮುದಾಯ ಮತ್ತಿತರ ಸಮುದಾಯದ ನಡುವಣ ಸೌಹಾರ್ದತೆ ಹಾಳು ಮತ್ತು ಹಿಂಸಾಚಾರ ಪ್ರಚೋದನೆ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ವಿರುದ್ಧ ಸಿಪಿಐ(ಎಂ) ಪೊಲೀಸ್ ದೂರು ದಾಖಲಿಸಿದೆ. ಸಿಪಿಐ-ಎಂ ಮುಖಂಡ ಎಂಡಿ ಸಲೀಂ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ.

ಪರೇಶ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಂಗಾಳಿಗರ ವಿರುದ್ಧ ಭಾವನೆಗಳನ್ನು ಪ್ರಚೋದಿಸುವಂತಿವೆ ಎಂದು ಸಲೀಂ ಟಾರಟೊಲಾ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪರೇಶ್ ಹೇಳಿಕೆ ದೇಶದ ಇತರ ಭಾಗಗಳಲ್ಲಿ ವಾಸಿಸುತ್ತಿರುವ ಬಂಗಾಳಿ ಜನರ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕವಾಗಿ ಇಂತಹ ಹೇಳಿಕೆ ಹಿಂಸಾಚಾರವನ್ನು ಪ್ರಚೋದಿಸುತ್ತವೆ ಮತ್ತು ದೇಶಾದ್ಯಂತ ಬಂಗಾಳ ಸಮುದಾಯ ಮತ್ತಿತರ ಸಮುದಾಯಗಳ ನಡುವಿನ ಸೌಹಾರ್ದತೆಯನ್ನು ಹಾಳು ಮಾಡುತ್ತವೆ ಎಂದು ಸಲೀಂ ಹೇಳಿದ್ದಾರೆ. 

ಇತ್ತೀಚಿಗೆ ಗುಜರಾತ್ ಚುನಾವಣಾ ಪ್ರಚಾರದ ವೇಳೆ ಪರೇಶ್ ರಾವಲ್ ನೀಡಿದ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ. ಗ್ಯಾಸ್ ಸಿಲಿಂಡರ್ ದುಬಾರಿಯಾಗಿದೆ ಆದರೆ, ಅದರ ಬೆಲೆ ಕಡಿಮೆಯಾಗಬಹುದು. ಜನರಿಗೆ ಉದ್ಯೋಗವೂ ಸಿಗಬಹುದು ಆದರೆ, ರೋಹಿಂಗ್ಯಾ ವಲಸೆಗಾರರು ಮತ್ತು ಬಾಂಗ್ಲಾದೇಶಿಗರು ದೆಹಲಿಯಂತೆ ನಿಮ್ಮ ಸುತ್ತ ವಾಸಿಸಲು ಆರಂಭಿಸಿದರೆ ಏನಾಗಲಿದೆ? ಗ್ಯಾಸ್ ಸಿಲಿಂಡರ್ ನಿಂದ ಏನು ಮಾಡ್ತಿರಾ? ಬಂಗಾಳಿಗರಿಗೆ ಮೀನು ಬೇಯಿಸಿಕೊಡುತ್ತೀರಾ ಎಂದು ವಿವಾದಾತಾತ್ಮಕ ಹೇಳಿಕೆ ನೀಡಿದ್ದರು.

ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಪರೇಶ್ ರಾವಲ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಬಂಗಾಳಿಗರ ಕ್ಷಮೆಯಾಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com