ಅಸ್ಸಾಂ: ವಲಸಿಗ ಮುಸ್ಲಿಮರ ಕುರಿತಾದ ಮ್ಯೂಸಿಯಂಗೆ ಬೀಗ; ಪ್ರತ್ಯೇಕ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿ ಕೇಳಿದ ಸಿಎಂ

ಅಸ್ಸಾಂ ನ ಗೋಲ್ಪಾರ ಜಿಲ್ಲೆಯಲ್ಲಿ ಖಾಸಗಿ ಮಿಯಾ ಮ್ಯೂಸಿಯಂ ಈಗ ವಿವಾದದ ಕೇಂದ್ರಬಿಂದುವಾಗಿದೆ.
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ
Updated on

ಅಸ್ಸಾಂ: ಅಸ್ಸಾಂ ನ ಗೋಲ್ಪಾರ ಜಿಲ್ಲೆಯಲ್ಲಿ ಖಾಸಗಿ ಮಿಯಾ ಮ್ಯೂಸಿಯಂ ಈಗ ವಿವಾದದ ಕೇಂದ್ರಬಿಂದುವಾಗಿದೆ. ಕಳೆದ ಎರಡು ದಿನದ ಹಿಂದಷ್ಟೇ ಉದ್ಘಾಟನೆಗೊಂಡ ಈ ಮ್ಯೂಸಿಯಂಗೆ ಜಿಲ್ಲಾಡಳಿತ ಬೀಗ ಜಡಿದಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ಗ್ರಾಮೀಣ್ (ಪಿಎಂಎವೈ-ಜಿ) ಅಡಿಯಲ್ಲಿ ಲಖಿಪುರದಲ್ಲಿ ನಿರ್ಮಾಣ ಮಾಡಲಾಗಿತ್ತು ಜಿಲ್ಲಾಡಳಿತದ ಆದೇಶದ ಮೇರೆಗೆ ಮ್ಯೂಸಿಯಂ ಗೆ ಬೀಗ ಜಡಿಯಲಾಗಿದೆ. 

ಮಿಯಾ ಪರಿಷತ್ ನಿಂದ ಈ ಪ್ರತ್ಯೇಕವಾದ ಮ್ಯೂಸಿಯಮ್ ನ್ನು ಉದ್ಘಾಟನೆ ಮಾಡಲಾಗಿತ್ತು, ವಲಸಿಗ ಮುಸ್ಲಿಮರ ಸಂಸ್ಕೃತಿಯನ್ನು ಪ್ರದರ್ಶಿಸಿ ಉಳಿಸುವುದು ಈ ಮ್ಯೂಸಿಯಮ್ ನ ಉದ್ದೇಶವಾಗಿತ್ತು.  ಆದರೆ ಕೆಲವರು ಇದು ಸ್ಥಳೀಯ ಸಂಸ್ಕೃತಿಗೆ ಮಾರಕ ಎಂದು ಭಾವಿಸಿ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿಯ ದಿಬ್ರುಘರ್ ನ ಶಾಸಕ ಪ್ರಶಾಂತ್ ಫುಕಾನ್ ಈ ಮ್ಯೂಸಿಯಮ್ ನ್ನು ಮುಚ್ಚುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. 

ಈ ಕುರಿತು ಮೌನ ಮುರಿದಿರುವ ಸಿಎಂ ಹಿಮಂತ ಬಿಸ್ವ ಶರ್ಮಾ, ಈ ಮ್ಯೂಸಿಯಂ ಗೆ ಹಣದ ಹರಿವಿನ ಮೂಲವನ್ನು ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ. ಮ್ಯೂಸಿಯಂ ನಲ್ಲಿ ಲುಂಗಿಯನ್ನು ಹೊರತುಪಡಿಸಿದರೆ ಉಳಿತ ಎಲ್ಲಾ ವಸ್ತುಗಳೂ ಮೂಲ ಅಸ್ಸಾಂ ನ ಸಂಸ್ಕೃತಿ ಹಾಗೂ ಪರಂಪರೆಗೆ ಸಂಬಂಧಿಸಿದ್ದೇ ಆಗಿದೆ. ಅದನ್ನು ಅಸ್ಸಾಮಿಗಳು ಸಾಂಸ್ಕೃತಿಕವಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com