ವಿವಾದಾತ್ಮಕ ಟ್ವೀಟ್: ಕಮಾಲ್ ಖಾನ್ ಗೆ ಜಾಮೀನು

ನಟ ಅಕ್ಷಯ್ ಕುಮಾರ್ ಹಾಗೂ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ನಟ ಕಮಾಲ್ ಆರ್ ಖಾನ್ ಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 
ಕಮಾಲ್ ಖಾನ್
ಕಮಾಲ್ ಖಾನ್
Updated on

ಮುಂಬೈ: ನಟ ಅಕ್ಷಯ್ ಕುಮಾರ್ ಹಾಗೂ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ಪ್ರಕರಣದಲ್ಲಿ ನಟ ಕಮಾಲ್ ಆರ್ ಖಾನ್ ಗೆ ಮುಂಬೈ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 

ಇದಕ್ಕೂ ಮುನ್ನ ಕಮಾಲ್ ಖಾನ್ ವಿರುದ್ಧ 2021 ರಲ್ಲಿ  ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುಂಬೈ ನ ಮತ್ತೊಂದು ಕೋರ್ಟ್ ಮಂಗಳವಾರದಂದು (ಸೆ.06) ರಂದು ಜಾಮೀನು ಮಂಜೂರು ಮಾಡಿತ್ತು. 

ವಿವಾದಾತ್ಮಕ ಟ್ವೀಟ್ ಪ್ರಕರಣದಲ್ಲಿ ಕಳೆದ ವಾರ ಖಾನ್ ಅವರನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. 

ಗುರುವಾರ ಬೆಳಿಗ್ಗೆ ಖಾನ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಖಾನ್ ಅವರ ಸಾಮಾಜಿಕ ಜಾಲತಾಣದ ಬರಹಗಳು ಕೋಮು ಪ್ರಚೋದಕನಾರಿಯಾಗಿತ್ತು ಹಾಗೂ ಅವರು ಬಾಲಿವುಡ್ ನ ತಾರೆಯರನ್ನು ಟಾರ್ಗೆಟ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಆದರೆ ಖಾನ್ ಪರ ವಾದ ಮಂಡಿಸಿದ ವಕೀಲರು, ಪ್ರಶ್ನೆಗೆ ಗುರಿಯಾಗಿರುವ ಖಾನ್ ಅವರ ಟ್ವೀಟ್ ಗಳು ಲಕ್ಷ್ಮಿ ಬಾಂಬ್ ಸಿನಿಮಾ (ಬಿಡುಗಡೆಯಾಗಿದ್ದು ಲಕ್ಷ್ಮಿ ಎಂಬ ಶೀರ್ಷಿಕೆಯಡಿ) ಕುರಿತಾಗಿತ್ತು ಹಾಗೂ ಪೊಲೀಸರು ಹೇಳಿರುವಂತೆ ಯಾವುದೇ ಅಪರಾಧವೂ ಸಂಭವಿಸಿಲ್ಲ, ಖಾನ್ ಸಿನಿಮಾ ಕ್ಷೇತ್ರದಲ್ಲಿ ವಿಮರ್ಶಕರಾಗಿಯೂ ಇದ್ದಾರೆ ಎಂದು ಜಾಮೀನು ಅರ್ಜಿ ವಾದದಲ್ಲಿ ವಕೀಲರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com