ಬಿಹಾರದ ರಾಜಕೀಯ ಬೆಳವಣಿಗೆ ಬಗ್ಗೆ ದೇವೇಗೌಡ ಅಭಿಪ್ರಾಯ ಇದು...

ಬಿಹಾರದ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ದೇಶದ ರಾಜಕೀಯದಲ್ಲಿ ಜನತಾದಳ ಪರಿವಾರ ಮತ್ತೆ ಪರ್ಯಾಯ ಆಯ್ಕೆಯಾಗುತ್ತಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. 
ದೇವೇಗೌಡ
ದೇವೇಗೌಡ

ಬೆಂಗಳೂರು: ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ಜೆಡಿಯು ಮಹಾಘಟಬಂಧನ್ ಜೊತೆ ಸೇರಿ ಸರ್ಕಾರ ರಚಿಸುತ್ತಿದೆ. ಈ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ದೇಶದ ರಾಜಕೀಯದಲ್ಲಿ ಜನತಾದಳ ಪರಿವಾರ ಮತ್ತೆ ಪರ್ಯಾಯ ಆಯ್ಕೆಯಾಗುತ್ತಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಬಿಹಾರದಲ್ಲಿ ನಡೆದಿರುವ ಬೆಳವಣಿಗೆ ಜನತಾ ಪರಿವಾರದ ಮೂಲವನ್ನು ಹೊಂದಿರುವ ಎರಡು ಪಕ್ಷಗಳು ಒಟ್ಟಿಗೆ ಸೇರಿ ಸರ್ಕಾರ ರಚಿಸುತ್ತಿದ್ದು, ಈ ಬೆಳವಣಿಗೆ ಜನತಾ ಪರಿವಾರ ಒಗ್ಗಟ್ಟಿನಿಂದ ಇದ್ದ ದಿನಗಳನ್ನು ನೆನೆಪಿಸುತ್ತಿದೆ ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ.

 
ಬಿಹಾರದ ಬೆಳವಣಿಗೆಗಳು ನನಗೆ ಜನತಾದಳ ಪರಿವಾರ ಒಗ್ಗಟ್ಟಿನಿಂದ ಇದ್ದ ದಿನಗಳನ್ನು ನೆನಪಿಸುತ್ತಿದೆ. ಜನತಾ ಪರಿವಾರ ಮೂವರು ಪ್ರಧಾನಿಗಳನ್ನು ನೀಡಿದೆ. ನಾನು ನನ್ನ ಉತ್ತರಾರ್ಧದ ದಿನಗಳಲ್ಲಿದ್ದೇನೆ ಆದರೆ ಈಗಿನ ಯುವ ಜನತೆ ನಿರ್ಧರಿಸಿದರೆ ಈ ಶ್ರೇಷ್ಠ ರಾಷ್ಟ್ರಕ್ಕೆ ಉತ್ತಮ ಪರ್ಯಾಯ ರಾಜಕೀಯ ಶಕ್ತಿಯನ್ನು ನೀಡಬಹುದು ಎಂದು ದೇವೇಗೌಡ ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com