ಕಾಂಗ್ರೆಸ್ ನಿಂದ ಹೊರ ನಡೆದ ನಂತರ ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿ ಜೈವೀರ್ ಶೇರ್ಗಿಲ್ ನೇಮಕ

ಗಾಂಧಿಗಳ ವಿರುದ್ಧ ಕಟುವಾದ ಟೀಕೆಗಳೊಂದಿಗೆ ಕಾಂಗ್ರೆಸ್‌ನಿಂದ ಹೊರ ನಡೆದ ಮೂರು ತಿಂಗಳ ನಂತರ, ಜೈವೀರ್ ಶೆರ್ಗಿಲ್ ಅವರನ್ನು ಶುಕ್ರವಾರ ಬಿಜೆಪಿ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ.
ಜೈವೀರ್ ಶೇರ್ಗಿಲ್
ಜೈವೀರ್ ಶೇರ್ಗಿಲ್
Updated on

ನವದೆಹಲಿ: ಗಾಂಧಿಗಳ ವಿರುದ್ಧ ಕಟುವಾದ ಟೀಕೆಗಳೊಂದಿಗೆ ಕಾಂಗ್ರೆಸ್‌ನಿಂದ ಹೊರ ನಡೆದ ಮೂರು ತಿಂಗಳ ನಂತರ, ಜೈವೀರ್ ಶೆರ್ಗಿಲ್ ಅವರನ್ನು ಶುಕ್ರವಾರ ಬಿಜೆಪಿ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ನಿಂದ ಹೀಗೆ ಹೊರಬಂದ ಅನೇಕ ನಾಯಕರಿಗೆ ಬಿಜೆಪಿಯಲ್ಲಿ ಉನ್ನತ ಸ್ಥಾನಮಾನ ನೀಡಲಾಗುತ್ತಿದೆ. ಶೆರ್ಗಿಲ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರು. 

ಕಾಂಗ್ರೆಸ್‌ನ ಪ್ರಸ್ತುತ ನಿರ್ಧಾರ ತೆಗೆದುಕೊಳ್ಳುವವರ ಸಿದ್ಧಾಂತ ಮತ್ತು ದೂರದೃಷ್ಟಿಯು ಆಧುನಿಕ ಭಾರತ ಮತ್ತು ಯುವಕರ ಆಕಾಂಕ್ಷೆಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಹಾಗಾಗೀ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ ಶೆರ್ಗಿಲ್ ತಿಳಿಸಿದ್ದಾರೆ.

ದೇಶ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದು ನನಗೆ ನೋವುಂಟು ಮಾಡಿದೆ. ಇದು ಸ್ವ-ಸೇವೆಯ ಹಿತಾಸಕ್ತಿಗಳಿಂದ ಪ್ರಭಾವಿತವಾಗಿರುತ್ತದೆ ಮತ್ತು ನಿರಂತರವಾಗಿ ವಾಸ್ತವತೆಯನ್ನು ನಿರ್ಲಕ್ಷಿಸುತ್ತದೆ. ಇದನ್ನು ನೈತಿಕವಾಗಿ ಸ್ವೀಕರಿಸಲು ಅಥವಾ ಕೆಲಸ ಮಾಡಲು ಮುಂದುವರೆದಂತೆ ಮಾಡಿದೆ. ಆದಾಗ್ಯೂ, ಕಾಂಗ್ರೆಸ್ ಜೊತೆಗಿನ ಒಡನಾಟದ ಸಮಯದಲ್ಲಿ ನನಗೆ ನೀಡಿದ ಎಲ್ಲಾ ಅವಕಾಶಗಳಿಗಾಗಿ ನಾನು ಶಾಶ್ವತವಾಗಿ ಋಣಿಯಾಗಿರುತ್ತೇನೆ ಎಂದು ಶೆರ್ಗಿಲ್  ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com