ಜಲವಾರ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಹಲವು ರೀತಿಯಲ್ಲಿ ಗಮನ ಸೆಳೆಯುತ್ತಿದೆ. ಇಂದು ಬೆಳಗ್ಗೆ ಜಲವಾರ್ ನಲ್ಲಿರುವ ಬಿಜೆಪಿ ಕಚೇರಿ ಬಳಿಯಿದ್ದ ಜನರಿಗೆ ಫ್ಲೈಯಿಂಗ್ ಕಿಸ್ ನೀಡುವ ಮೂಲಕ ನೆರೆದಿದ್ದ ಜನರಿಗೆ ಅಚ್ಚರಿಯನ್ನುಂಟು ಮಾಡಿದರು.
ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಏಕೆ ಜೈ ಶ್ರೀರಾಮ್, ಹೇ ರಾಮ್ ಎಂದು ಪಠಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಬೆನ್ನಲ್ಲೇ ರಾಹುಲ್ ಗಾಂಧಿ ಈ ರೀತಿಯಲ್ಲಿ ಗಮನ ಸೆಳೆದರು. ಖೇಲ್ ಸಂಕಲ್ ನಲ್ಲಿ ಸೋಮವಾರ ರಾತ್ರಿ ಸ್ಥಗತಗೊಂಡಿದ್ದ ಯಾತ್ರೆ ಇಂದು ಬೆಳಗ್ಗೆ ಜಲವಾರ್ ನಗರವನ್ನು ದಾಟಿತು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, ಹಲವಾರು ಸಚಿವರು ಮತ್ತು ಶಾಸಕರು ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು. ಸರಿ ಸುಮಾರು 12 ಕಿ.ಮೀ ಕ್ರಮಿಸಿದ ನಂತರ ಯಾತ್ರೆಯು ಬೆಳಿಗ್ಗೆ 10 ಗಂಟೆಗೆ ದೇವರಘಟ್ಟ ತಲುಪಿತು.
ಭೋಜನ ವಿರಾಮದ ನಂತರ ಸುಕೇತ್ನಿಂದ ಮಧ್ಯಾಹ್ನ 3.30 ಕ್ಕೆ ಪುನರಾರಂಭವಾಗುತ್ತದೆ. ಜಲಾವರ್ನ ಮೋರು ಕಲಾನ್ ಖೇಲ್ ಮೈದಾನದಲ್ಲಿ ರಾತ್ರಿ ತಂಗಲು ಯೋಜಿಸಲಾಗಿದೆ.
Advertisement