ರಾಜ್ಯಸಭೆ
ರಾಜ್ಯಸಭೆ

ಸದನದಲ್ಲಿ ದುರ್ನಡತೆ: 1 ವಾರದವರೆಗೆ ರಾಜ್ಯಸಭೆ ಕಲಾಪದಿಂದ ವಿಪಕ್ಷಗಳ 19 ಸದಸ್ಯರ ಅಮಾನತು!

ಅಮಾನತುಗೊಂಡ ವಿಪಕ್ಷ ಸಂಸದರು ಸದನವನ್ನು ನಡೆಯಲು ಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು ಒಂದು ಗಂಟೆ ಮುಂದೂಡಲಾಯಿತು. ಆದರೆ ಪದೇ ಪದೇ ಸದನದಲ್ಲಿ ಗದ್ದಲ, ಕೋಲಾಹಲ ವೆಬ್ಬಿಸಿದ್ದರಿಂದ ರಾಜ್ಯಸಭೆ ಸದನವನ್ನು ನಾಳೆಗೆ ಮುಂದೂಡಲಾಗಿದೆ.
Published on

ನವದೆಹಲಿ: ಅಮಾನತುಗೊಂಡ ವಿಪಕ್ಷ ಸಂಸದರು ಸದನವನ್ನು ನಡೆಯಲು ಬಿಡದೇ ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಇಂದು ಸದನವನ್ನು ಒಂದು ಗಂಟೆ ಮುಂದೂಡಲಾಯಿತು. ಆದರೆ ಪದೇ ಪದೇ ಸದನದಲ್ಲಿ ಗದ್ದಲ, ಕೋಲಾಹಲ ವೆಬ್ಬಿಸಿದ್ದರಿಂದ ರಾಜ್ಯಸಭೆ ಸದನವನ್ನು ನಾಳೆಗೆ ಮುಂದೂಡಲಾಗಿದೆ.

19 ರಾಜ್ಯಸಭಾ ಸಂಸದರ ವಿರುದ್ಧದ ಕ್ರಮವು ಆಡಳಿತ ಸರ್ಕಾರದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ಪ್ರಶ್ನಿಸುವ ದನಿಗಳನ್ನು ಮುಚ್ಚುವ ಪ್ರಯತ್ನ ಎಂದು ವಿಪಕ್ಷಗಳು ಹೇಳುತ್ತಿದ್ದು ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಕೋಪ ಇದರಿಂದ ಹೆಚ್ಚಾಗಿದೆ. ಈ ಸರ್ಕಾರವು ಪ್ರಜಾಪ್ರಭುತ್ವವನ್ನು ಅಮಾನತುಗೊಳಿಸಿದೆ ಎಂದು ತೃಣಮೂಲ ನಾಯಕ ಡೆರೆಕ್ ಒ'ಬ್ರಿಯಾನ್ ಇಂದು ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯಸಭೆಯಲ್ಲಿ ಪ್ರತಿಪಕ್ಷ ಸಂಸದರು ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ ಮತ್ತು ಸರಕು ಮತ್ತು ಸೇವಾ ತೆರಿಗೆ ಅಥವಾ ಜಿಎಸ್‌ಟಿ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಒತ್ತಾಯಿಸುತ್ತಿದ್ದಾರೆ, ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ನಿಯಮ 267 (ರಾಜ್ಯಸಭೆಯಲ್ಲಿ ವ್ಯವಹಾರದ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳು) ಅಡಿಯಲ್ಲಿ ಚರ್ಚೆಗಳನ್ನು ನಡೆಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ.

'ನೀವು ನಮ್ಮನ್ನು ಅಮಾನತುಗೊಳಿಸಬಹುದು ಆದರೆ ನೀವು ನಮ್ಮನ್ನು ಮೌನಗೊಳಿಸಲು ಸಾಧ್ಯವಿಲ್ಲ. ಇದು. ಶೋಚನೀಯ ಪರಿಸ್ಥಿತಿ. ನಮ್ಮ ಗೌರವಾನ್ವಿತ ಸಂಸದರು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಲು  ಪ್ರಯತ್ನಿಸುತ್ತಿದ್ದಾರೆ ಆದರೆ ಅವರನ್ನು ಅಮಾನತುಗೊಳಿಸಲಾಗುತ್ತಿದೆ. ಇದು ಎಲ್ಲಿಯವರೆಗೆ ಮುಂದುವರಿಯುತ್ತದೆ? ಸಂಸತ್ತಿನ ಪಾವಿತ್ರ್ಯವು ಹೆಚ್ಚು ರಾಜಿಯಾಗಿದೆ' ಎಂದು ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಸ್ಪೀಕರ್ ಓಂ ಬಿರ್ಲಾ ಅವರ ಎಚ್ಚರಿಕೆ ಬಳಿಕವೂ ಸದನದೊಳಗೆ ಭಿತ್ತಿಪತ್ರಗಳನ್ನು ಹಿಡಿದಿದ್ದಕ್ಕಾಗಿ ಲೋಕಸಭೆಯಲ್ಲಿ ನಾಲ್ವರು ಕಾಂಗ್ರೆಸ್ ಸಂಸದರು ಸಂಪೂರ್ಣ ಅಧಿವೇಶನದವರೆಗೆ ಅಮಾನತ್ತಾದ ಮರುದಿನವೇ ಇಂದಿನ ಬೆಳವಣಿಗೆಯಾಗಿದೆ.

ಅಮಾನತುಗೊಂಡಿರುವ ರಾಜ್ಯಸಭಾ ಸಂಸದರುಗಳೆಂದರೆ
* ಸುಶ್ಮಿತಾ ದೇವ್, ತೃಣಮೂಲ ಕಾಂಗ್ರೆಸ್
* ಮೌಸಮ್ ನೂರ್, ತೃಣಮೂಲ ಕಾಂಗ್ರೆಸ್
* ಶಾಂತಾ ಛೆಟ್ರಿ, ತೃಣಮೂಲ ಕಾಂಗ್ರೆಸ್
* ಡೋಲಾ ಸೇನ್, ತೃಣಮೂಲ ಕಾಂಗ್ರೆಸ್
* ಸಂತಾನು ಸೇನ್, ತೃಣಮೂಲ ಕಾಂಗ್ರೆಸ್
* ಅಭಿ ರಂಜನ್ ಬಿಸ್ವರ್, ತೃಣಮೂಲ ಕಾಂಗ್ರೆಸ್
* ಎಂಡಿ ನಾದಿಮುಲ್ ಹಕ್, ತೃಣಮೂಲ ಕಾಂಗ್ರೆಸ್
* ಎಂ ಹಮಮದ್ ಅಬ್ದುಲ್ಲಾ, ಡಿಎಂಕೆ
* ಬಿ ಲಿಂಗಯ್ಯ ಯಾದವ್, ತೆಲಂಗಾಣ ರಾಷ್ಟ್ರ ಸಮಿತಿ (TRS)
* ಎ.ಎ. ರಹೀಮ್, ಸಿಪಿಐ(ಎಂ)
* ರವಿಹಂದರ ವಡ್ಡಿರಾಜು, ಟಿ.ಆರ್.ಎಸ್
* ಎಸ್ ಕಲ್ಯಾಣಸುಂದರಂ, ಡಿಎಂಕೆ
* ಆರ್ ಗಿರಂಜನ್, ಡಿಎಂಕೆ
* ಎನ್ಆರ್ ಎಲಾಂಗೋ, ಡಿಎಂಕೆ
* ವಿ ಶಿವದಾಸನ್, ಸಿಪಿಐ(ಎಂ)
* ಎಂ ಷಣ್ಮುಗಂ, ಡಿಎಂಕೆ
* ದಾಮೋದರ ರಾವ್ ದಿವಕೊಂಡ, ಟಿಆರ್ಎಸ್
* ಸಂತೋಷ್ ಕುಮಾರ್ ಪಿ, ಸಿಪಿಐ
* ಕನಿಮೊಳಿ ಎನ್ವಿಎನ್ ಸೋಮು, ಡಿಎಂಕೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com