ಹೈರ್ ಅಂಡ್ ಫೈರ್.. ಯೂಸ್ ಅಂಡ್ ಥ್ರೋ; ಅಗ್ನಿಪಥ್ ವಿರೋಧಿಸಿ ಕೇಂದ್ರಕ್ಕೆ ಉದ್ಧವ್ ಠಾಕ್ರೆ ಚಾಟಿ

ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಯ ನೇಮಕಾತಿ ಯೋಜನೆಯಾದ ಅಗ್ನಿಪಥ್ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಕೇಂದ್ರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on

ಮುಂಬೈ: ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಯ ನೇಮಕಾತಿ ಯೋಜನೆಯಾದ ಅಗ್ನಿಪಥ್ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು ಕೇಂದ್ರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಇಂದು ಬಹಳಷ್ಟು ಯುವಕರು ಅಗ್ನಿಪಥ್ ಯೋಜನೆಯ ವಿರುದ್ಧ ಬೀದಿಗಿಳಿದಿದ್ದಾರೆ. ಅವರೇಕೆ ಕೋಪಗೊಂಡಿದ್ದಾರೆ? ಅವರನ್ನು ಬೀದಿಗೆ ಬರಲು ಯಾರು ಕೇಳಿದರು? ಎಂದು  ಅವರ ಪಕ್ಷವಾದ ಶಿವಸೇನೆಯ 56ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಕೇಂದ್ರವನ್ನ ಪ್ರಶ್ನಿಸಿದರು.

ಅದಕ್ಕಾಗಿಯೇ ನಾನು ನನ್ನ ರ್ಯಾಲಿಯಲ್ಲಿ ಹೇಳಿದ್ದೆ. ನಮ್ಮ ಹೃದಯದಲ್ಲಿ ಶ್ರೀರಾಮನಿದ್ದಾನೆ. ಆದರೆ ನಿಮ್ಮ ಕೈಯಲ್ಲಿ ಕೆಲಸವಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ . ನಿಮಗೆ ಕೆಲಸವಿಲ್ಲದಿದ್ದರೆ  ಭಗವಂತನ ನಾಮವನ್ನು ಜಪಿಸುವುದು ಸಾಕಾಗುವುದಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಯೋಜನೆಯನ್ನು ಲೇವಡಿ ಮಾಡಿದ ಉದ್ಧವ್ ಠಾಕ್ರೆ ನಾಳೆ ನೀವು ಸರ್ಕಾರವನ್ನು ನೇಮಿಸಲು ಬಯಸುತ್ತೀರಿ ಮತ್ತು ಟೆಂಡರ್‌ಗಳನ್ನು ಹೊರತರುತ್ತೀರಿ. ನೀವು ಟೆಂಡರ್‌ಗಳನ್ನು ಮುಖ್ಯಮಂತ್ರಿಗೋ ಅಥವಾ ಪ್ರಧಾನ ಮಂತ್ರಿಗಾಗಿ ಬಿಡುಗಡೆ ಮಾಡುತ್ತೀರೋ? ನೀವು ಈ ರೀತಿಯ ವಿಷಯಗಳನ್ನು ಚಲಾಯಿಸಲು ಬಯಸಿದರೆ ಎಲ್ಲದಕ್ಕೂ ನೇಮಕಾತಿ ಪರಿಕಲ್ಪನೆಯನ್ನು ಅನ್ವಯಿಸಿ. ಹೈರ್ ಅಂಡ್ ಫೈರ್.. ಯೂಸ್ ಅಂಡ್ ಥ್ರೋ… ಎಂದರು.

ನೋಟು ಅಮಾನ್ಯೀಕರಣ ಮತ್ತು ತರುವಾಯ ಬೃಹತ್ ಪ್ರತಿಭಟನೆಗಳನ್ನು ಹುಟ್ಟುಹಾಕಿದ ಕೃಷಿ ಕಾನೂನುಗಳನ್ನು ಉಲ್ಲೇಖಿಸಿದ ಅವರು ಜನರು ಮೊದಲನೆಯದನ್ನು ಜೀರ್ಣಿಸಿಕೊಂಡರು ಆದರೆ ಎರಡನೇ ನಿದರ್ಶನದಲ್ಲಿ ರೈತರ ಪ್ರತಿಭಟನೆಯನ್ನು ಎದುರಿಸಲು ಸರ್ಕಾರವು ಕಾಯ್ದೆ ಹಿಂತೆಗೆದುಕೊಳ್ಳಬೇಕಾಯಿತು ಎಂದು ಹೇಳಿದರು. ಆದರೆ ಕೇಂದ್ರವು ಇಂದು ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

ನೀವು ಈಡೇರಿಸುವ ಭರವಸೆಗಳನ್ನು ಮಾತ್ರ ನೀಡಬೇಕು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ದೊಡ್ಡ ಭರವಸೆಗಳನ್ನು ನೀಡುತ್ತೀರಿ.  ಆದರೆ ನೀವು ಏನು ಮಾಡುತ್ತೀರಿ? ಏನೂ ಇಲ್ಲ, ನೀವು ಅಗ್ನಿಪಥ್, ಅಗ್ನಿವೀರರಂತಹ ದೊಡ್ಡ ಹೆಸರುಗಳೊಂದಿಗೆ ಯೋಜನೆಗಳನ್ನು ತರುತ್ತೀರಿ ಎಂದು ಅವರು ಹೇಳಿದರು. ಜನರಿಗೆ ನೀಡಿದ ಭರವಸೆಗಳನ್ನು ಎಂದಿಗೂ ಉಲ್ಲಂಘಿಸದ ಕಾರಣ ಅವರ ಶಿವಸೇನೆ ಪ್ರಬಲವಾಗಿದೆ ಎಂದು ಹೇಳಿದರು.

ಅಗ್ನಿಪಥ್ ಉತ್ತರ ಭಾರತದಲ್ಲಿ ಯುವಕರ ಹಿಂಸಾತ್ಮಕ ಪ್ರತಿಭಟನೆಗೆ ಕಾರಣವಾಗಿದೆ. ಮಹಾರಾಷ್ಟ್ರವು ಈ ವಿಷಯದ ಬಗ್ಗೆ ಇದುವರೆಗೆ ಯಾವುದೇ ಹಿಂಸಾತ್ಮಕ ಪ್ರತಿಭಟನೆಗಳನ್ನು ಕಂಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com