ಗುಜರಾತ್ ವಿಧಾನಸಭಾ ಚುನಾವಣೆ: 2ನೇ ಪಟ್ಟಿ ಘೋಷಣೆ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದ ಆಂತರಿಕ ಕಲಹ

ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ 2ನೇ ಪಟ್ಟಿ ಘೋಷಣೆ ಮಾಡಿದ ಬಳಿಕ ಆಂತರಿಕ ಕಲಹ ಭುಗಿಲೆದ್ದಿದೆ.
ಬಿಜೆಪಿ ಸಾಂದರ್ಭಿಕ ಚಿತ್ರ
ಬಿಜೆಪಿ ಸಾಂದರ್ಭಿಕ ಚಿತ್ರ

ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ 2ನೇ ಪಟ್ಟಿ ಘೋಷಣೆ ಮಾಡಿದ ಬಳಿಕ ಆಂತರಿಕ ಕಲಹ ಭುಗಿಲೆದ್ದಿದೆ.

ಶಾಸಕ ಕೇಸರಿಸಿಂಗ್ ಸೋಲಂಕಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾದ 48 ಗಂಟೆಗಳಲ್ಲಿ ವಾಪಸ್ಸಾಗಿದ್ದರೆ, ಶಾಸಕ ಜನ್ಖನಾ ಪಟೇಲ್ ಬದಲಿಗೆ ಸಂದೀಪ್ ದೇಸಾಯಿಗೆ ಟಿಕೆಟ್ ನೀಡಿದ್ದಕ್ಕೆ ಪಟೇಲ್ ಬೆಂಬಲಿಗರು ಸೂರತ್ ನ ಚೋರ್ಯಾಸಿಯಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಬಿಜೆಪಿ 6 ಮಂದಿಯ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಂಕಿ-ಅಂಶಗಳ ಪ್ರಕಾರ, ಜನ್ಖನಾ ಪಟೇಲ್, 2017 ರಲ್ಲಿ ದಾಖಲೆಯ ಮತಗಳ ಅಂತರದಲ್ಲಿ (1 ಲಕ್ಷ ಮತಗಳ) ಗೆಲುವು ಸಾಧಿಸಿದ್ದರು. ಇವರಿಗಿಂತ ಹೆಚ್ಚಿನ ಮತಗಳ ಅಂತರವನ್ನು ಸಿಎಂ ಭೂಪೇಂದ್ರ ಪಟೇಲ್ ಪಡೆದಿದ್ದರು.

 
ಗುಜರಾತ್ ನ ಸೂರತ್ ಪ್ರಾಂತ್ಯದಲ್ಲಿ ಬಿಜೆಪಿ, ಟಿಕೆಟ್ ಹಂಚಿಕೆ ಬಳಿಕ ಅತಿ ಹೆಚ್ಚು ಆಂತರಿಕ ಭಿನ್ನಮತ, ಕಲಹವನ್ನು ಎದುರಿಸುತ್ತಿದೆ. ಇಲ್ಲಿನ ಬಿಜೆಪಿ ನಾಯಕ ಯಜುವೇಂದ್ರ ದುಬೆ ಮಾತನಾಡಿ, ಹಿಂದಿ ಮಾತನಾಡುವ ಮತದಾರರು ಹಾಗೂ ಕೊಲಿ ಸಮುದಾಯದ ಮತದಾರರು ಚೊರ್ಯಾಸಿ ಕ್ಷೇತ್ರದಲ್ಲಿ ಪ್ರಬಲರಾಗಿದ್ದಾರೆ. ಜನ್ಖನ ಪಟೇಲ್ ಕೊಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆಕೆ ದಾಖಲೆಯ ಅಂತರದಲ್ಲಿ ಚುನಾವಣೆಯಲ್ಲಿ ಗೆದ್ದಿದ್ದರೂ ಅವರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ನಮಗೆ ಕಾರಣ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಪಕ್ಷ ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕೆಂದಿದ್ದರೂ ಜಾತಿಯ ಆಧಾರದಲ್ಲಿ ಟಿಕೆಟ್ ನ್ನು ನೀಡಬೇಕು ಬಹುಶಃ ಇದೇ ಕಾರಣಕ್ಕಾಗಿ ಸ್ಥಳೀಯ ಬಿಜೆಪಿ ನಾಯಕರು ಬಂಡಾಯವೆದ್ದಿದ್ದಾರೆ ಎಂದು ಹೇಳಿದ್ದಾರೆ. ಇನ್ನು ವರಚ್ಚಾದಲ್ಲಿಯೂ ಇದೇ ಮಾದರಿಯ ಪರಿಸ್ಥಿತಿ ಉಂಟಾಗಿದ್ದು, ಈ ಭಾಗದಲ್ಲಿ ಬಿಜೆಪಿ ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರವಾದ ಭಗ ಬರದ್ ಅವರಿಗೆ ಟಿಕೆಟ್ ನೀಡಿದೆ. ಈ ಬೆಳವಣಿಗೆ ಸ್ಥಳೀಯ ಬಿಜೆಪಿ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com