'ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿಯನ್ನು ಗಂಭೀರ ರಾಜಕಾರಣಿ ಎಂದು ಪರಿಗಣಿಸಬಹುದು, ಆದರೆ ಯಾತ್ರೆಯಲ್ಲಿ ನಿರ್ದಿಷ್ಟ ವಿಷಯದ ಮೇಲೆ ಗುರಿಯಿಲ್ಲ': ವಿಶ್ಲೇಷಣೆ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ  ಮಹಾರಾಷ್ಟ್ರದಲ್ಲಿ ಸಾಗುತ್ತಿದೆ.  ಈ ಭಾರತ್ ಜೋಡೋ ಯಾತ್ರೆಯು ರಾಹುಲ್ ಗಾಂಧಿಯವರನ್ನು ರಾಜಕೀಯದಲ್ಲಿ ಗಂಭೀರವಾಗಿ ಪರಿಗಣಿಸಲು ಮತ್ತು ಅವರು ಗಂಭೀರ ರಾಜಕಾರಣಿಯಾಗಿ ಹೊರಹೊಮ್ಮಲು ಮತ್ತು ಅವರ ಅಸಾಧಾರಣ ಸಾಂಪ್ರದಾಯಿಕ ಎದುರಾಳಿ ಬಿಜೆಪಿಯನ್ನು ಎದುರಿಸಲು ಅವರಿಗೆ ಬಲವನ್ನು ನೀಡುತ್ತದೆ
ಭಾರತ್ ಜೋಡೋ ಯಾತ್ರೆಯಲ್ಲಿ ಬೆಂಬಲಿಗರೊಂದಿಗೆ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯಲ್ಲಿ ಬೆಂಬಲಿಗರೊಂದಿಗೆ ರಾಹುಲ್ ಗಾಂಧಿ

ಭೋಪಾಲ್: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ(Rahul Gandhi) ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ(Bharat Jodo yatra)  ಮಹಾರಾಷ್ಟ್ರದಲ್ಲಿ ಸಾಗುತ್ತಿದೆ.  ಈ ಭಾರತ್ ಜೋಡೋ ಯಾತ್ರೆಯು ರಾಹುಲ್ ಗಾಂಧಿಯವರನ್ನು ರಾಜಕೀಯದಲ್ಲಿ ಗಂಭೀರವಾಗಿ ಪರಿಗಣಿಸಲು ಮತ್ತು ಅವರು ಗಂಭೀರ ರಾಜಕಾರಣಿಯಾಗಿ ಹೊರಹೊಮ್ಮಲು ಮತ್ತು ಅವರ ಅಸಾಧಾರಣ ಸಾಂಪ್ರದಾಯಿಕ ಎದುರಾಳಿ ಬಿಜೆಪಿಯನ್ನು ಎದುರಿಸಲು ಅವರಿಗೆ ಬಲವನ್ನು ನೀಡುತ್ತದೆ.

ಆದರೆ ಪಕ್ಷದ ಮೇಲೆ ಧನಾತ್ಮಕ ಶಾಶ್ವತ ಪರಿಣಾಮವನ್ನು ಸಾಧ್ಯವಾಗಲಿಕ್ಕಿಲ್ಲ. ದೇಶದ ರಾಜಕೀಯದಲ್ಲಿ ನಿರ್ದಿಷ್ಟ ವಿಷಯಗಳ ಮೇಲೆ ಭಾರತ್ ಜೋಡೋ ಯಾತ್ರೆ ಕೇಂದ್ರೀಕರಿಸಬೇಕಾಗಿತ್ತು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಸೆಪ್ಟೆಂಬರ್ 7 ರಂದು ತಮಿಳುನಾಡಿನಿಂದ ಪ್ರಾರಂಭವಾದ ಕಾಂಗ್ರೆಸ್ ಪಕ್ಷದ 3,570 ಕಿಮೀ ಉದ್ದದ ಪಾದಯಾತ್ರೆ ಮೊನ್ನೆ ನವೆಂಬರ್ 7 ರಂದು ಮಹಾರಾಷ್ಟ್ರವನ್ನು ಪ್ರವೇಶಿಸಿತು. ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ಮಧ್ಯಪ್ರದೇಶವನ್ನು ಪ್ರವೇಶಿಸಿದ ನಂತರ ನವೆಂಬರ್ 20 ರಂದು ಬುರ್ಹಾನ್ಪುರ ಜಿಲ್ಲೆಯಲ್ಲಿ ಸುಮಾರು ಅರ್ಧದಾರಿಯ ಗಡಿಯನ್ನು ತಲುಪಲಿದೆ.

ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಪುನಶ್ಚೇತನಗೊಳಿಸುವುದು ಈ ಭಾರತ್ ಜೋಡೋ ಜನಸಂಪರ್ಕ ಕಾರ್ಯಕ್ರಮದ ಘೋಷಿತ ಗುರಿಯಾಗಿದೆ. ಮಧ್ಯ ಪ್ರದೇಶದಲ್ಲಿ ಯಾತ್ರೆಯ ಉಸ್ತುವಾರಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ವಹಿಸಿದ್ದಾರೆ.

ಈ ಯಾತ್ರೆಯು ಭಾರತದ ರಾಜಕೀಯದ ಮೇಲೆ ದೊಡ್ಡ ಪರಿಣಾಮಗಳನ್ನು ಬೀರಲಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಹೋಲಿಸಿದರೆ ರಾಹುಲ್ ಗಾಂಧಿಯನ್ನು ಗಂಭೀರವಲ್ಲದ ರಾಜಕಾರಣಿ ಎಂದು ಬಿಂಬಿಸಲು ಆರ್‌ಎಸ್‌ಎಸ್/ಬಿಜೆಪಿಯ ಸಂಯೋಜಿತ ಪ್ರಚಾರ ಮಾಡುತ್ತಿದ್ದು, ಅದನ್ನು ಪರಿಣಾಮಕಾರಿಯಾಗಿ ಹದಗೆಡಿಸುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಅಸ್ಲಂ ಶೇರ್ ಖಾನ್ ಹೇಳಿದ್ದಾರೆ.

ಭಾರತದ ಮಾಜಿ ಹಾಕಿ ಆಟಗಾರ ಮತ್ತು ಒಲಿಂಪಿಯನ್ ಅಸ್ಲಂ ಶೇರ್ ಖಾನ್, ಭಾರತೀಯ ಜನತಾ ಪಕ್ಷ-ರಾಷ್ಟ್ರೀಯ ಸ್ವಯಂಸೇವಕ ಸಂಘ (ಬಿಜೆಪಿ-ಆರ್‌ಎಸ್‌ಎಸ್) ಒಗ್ಗೂಡಿಸುತ್ತಿರುವ "ವಿಭಜನೆ ಮತ್ತು ಧ್ರುವೀಕರಣದ ರಾಜಕೀಯವನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್ ನ ಪಾದಯಾತ್ರೆ ಸಹಕಾರಿಯಾಗಲಿದೆ.

52 ವರ್ಷದ ರಾಹುಲ್ ಗಾಂಧಿಯವರು ಕಾಂಗ್ರೆಸ್ ನಾಯಕರ ಅಪಾರ ಒತ್ತಡದ ನಡುವೆಯೂ ಪಕ್ಷದ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸಲಾಗಿದೆ. ರಾಹುಲ್ ಗಾಂಧಿ ಅವರು ಭಾರತೀಯ ರಾಜಕೀಯದಲ್ಲಿ ಸುದೀರ್ಘ ಇನ್ನಿಂಗ್ಸ್ ಹೊಂದಿರುವ ಗಂಭೀರ ರಾಜಕಾರಣಿ ಎಂದು ಸಾಬೀತುಪಡಿಸಿದ್ದಾರೆ ಎಂದರು. 
ಈ ಯಾತ್ರೆಯು ಲೋಕಸಭೆಯ ಸಂಸದರ ಸ್ಥಾನವನ್ನು ಪ್ರಮುಖ ರಾಜಕಾರಣಿಯಾಗಿ ಭದ್ರಪಡಿಸುತ್ತದೆ ಎಂದು ಖಾನ್ ಹೇಳಿದ್ದಾರೆ.

ಸುಮಾರು 150 ದಿನಗಳ ಕಾಲ ನಡೆಯುವ ರಾಷ್ಟ್ರವ್ಯಾಪಿ ಪಾದಯಾತ್ರೆ ಜನವರಿಯಲ್ಲಿ ಶ್ರೀನಗರದಲ್ಲಿ ಕೊನೆಗೊಳ್ಳಲಿದ್ದು, ನಿರೀಕ್ಷಿತ ರೀತಿಯ ಪ್ರತಿಕ್ರಿಯೆ ಪಡೆಯುತ್ತಿಲ್ಲ ಎಂದು ಹಿರಿಯ ಪತ್ರಕರ್ತೆ ಮತ್ತು ರಾಜಕೀಯ ವಿಶ್ಲೇಷಕಿ ಗಿರಿಜಾ ಶಂಕರ್ ಹೇಳುತ್ತಾರೆ.
ಭಾರತ್ ಜೋಡೋ ಯಾತ್ರೆಯು ಯಾವುದೇ ನಿರ್ದಿಷ್ಟ ವಿಷಯದ ಮೇಲೆ ಕೇಂದ್ರೀಕೃತವಾಗಿಲ್ಲ. ಆದ್ದರಿಂದ, ಹಿಂದೆ ಇಂತಹ ಮೆರವಣಿಗೆಗಳು ಹೊರಹೊಮ್ಮಿದ ರೀತಿಯ ಪ್ರತಿಕ್ರಿಯೆಯನ್ನು ಇದರಲ್ಲಿ ಕಾಣುತ್ತಿಲ್ಲ. ಗಾಂಧೀಜಿ ಅವರು ಬ್ರಿಟಿಷ್ ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಉದ್ದೇಶದಿಂದ ದಂಡಿ ಸತ್ಯಾಗ್ರಹ ಕೈಗೊಂಡರು. ಅದು ನಾಗರಿಕರಿಂದ ಭಾರಿ ಸ್ವಯಂಪ್ರೇರಿತ ಬೆಂಬಲವನ್ನು ಪಡೆದಿತ್ತು. 

1990 ರಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿಯವರ ರಥಯಾತ್ರೆಯು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿ ಸಾಮೂಹಿಕ ಜನಾಂದೋಲನದ ಮೇಲೆ ಮಾತ್ರ ಕೇಂದ್ರೀಕೃತವಾಗಿತ್ತು. ಆ ಸಮಯದಲ್ಲಿ ಅದು ಜನರಿಂದ ಭಾರಿ ಪ್ರತಿಕ್ರಿಯೆಯನ್ನು ಗಳಿಸಿತು. ಕಾಂಗ್ರೆಸ್ ಯಾತ್ರೆಯು ಕೋಮುವಾದ ಮತ್ತು ದ್ವೇಷದ ಹೋರಾಟದಂತಹ ನಿರ್ದಿಷ್ಟ ವಿಷಯಗಳ ಮೇಲೆ ಕೇಂದ್ರೀಕರಿಸಬೇಕಾಗಿತ್ತು. ಅದು ಪಕ್ಷಕ್ಕೆ ಸಮೃದ್ಧ ಲಾಭವನ್ನು ನೀಡುತ್ತಿತ್ತು, ಸಾಮಾನ್ಯ ನಾಗರಿಕರಿಂದ ಭಾರೀ ಪ್ರತಿಕ್ರಿಯೆಯನ್ನು ಆಕರ್ಷಿಸಬಹುದಿತ್ತು ಎನ್ನುತ್ತಾರೆ.

ಲೋಕಸಭೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ 2014 ರ ನಂತರ ದೇಶದ ರಾಜಕೀಯ ಸ್ಥಿತಿಗತಿ ಬದಲಾಗಿದೆ. 

ಹಿರಿಯ ಪತ್ರಕರ್ತ ಮತ್ತು ಲೇಖಕ ರಶೀದ್ ಕಿದ್ವಾಯಿ, ಒಂದು ರಾಜಕೀಯ ಪಕ್ಷ ಅಥವಾ ಅದರ ನಾಯಕತ್ವವನ್ನು ಚುನಾವಣಾ ಯಶಸ್ಸು ಅಥವಾ ಅದರ ಕೊರತೆಯಿಂದ ನಿರ್ಣಯಿಸಲಾಗುತ್ತದೆ. ಈ ಅರ್ಥದಲ್ಲಿ, ರಾಹುಲ್ ಅವರ ಯಾತ್ರೆ ಮತ್ತು ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಬಯಸದಿದ್ದರೂ ಸಹ ಪರಸ್ಪರ ಸಂಬಂಧ ಹೊಂದಿವೆ ಎಂದರು. 

ಬಿಜೆಪಿ ಮತ್ತು ಅದರ ಬ್ರ್ಯಾಂಡ್ ರಾಜಕಾರಣವನ್ನು ವಿರೋಧಿಸುವ ಜನರನ್ನು ಒಗ್ಗೂಡಿಸುವಲ್ಲಿ ದೇಶಾದ್ಯಂತ ಪಾದಯಾತ್ರೆ ವೇಗವರ್ಧಕ ಪಾತ್ರವನ್ನು ವಹಿಸುತ್ತದೆ ಎಂದು ಸಾಮಾಜಿಕ ವಿಜ್ಞಾನಿ ಸಿ.ಡಿ.ನಾಯ್ಕ ಹೇಳಿದರು.

ಭಾರತ್ ಜೋಡೋ ಯಾತ್ರೆಯು ರಾಜಕೀಯವಾಗಿ ಆಡಳಿತಾರೂಢ ಪಕ್ಷವನ್ನು ವಿರೋಧಿಸುವವರನ್ನು ಖಂಡಿತವಾಗಿ ಒಂದುಗೂಡಿಸುತ್ತದೆ. ಆದರೆ ಅದೇ ಸಮಯದಲ್ಲಿ, ಈ ಯಾತ್ರೆಯನ್ನು ವಿರೋಧಿಸುವವರನ್ನು ಇದು ಪುನಃ ಸೇರಿಸುತ್ತದೆ ಎಂದು ಮಾವ್ ಮೂಲದ ಡಾ.ನ ಮಾಜಿ ಪ್ರಾಧ್ಯಾಪಕ ನಾಯಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com