ನವದೆಹಲಿ: ವೀರಪ್ಪನ್ ಎನ್ ಕೌಂಟರ್ ತಂಡದಲ್ಲಿದ್ದ ಖ್ಯಾತ ಪೊಲೀಸ್ ಅಧಿಕಾರಿ ವಿಜಯ್ ಕುಮಾರ್ ಗೃಹ ಸಚಿವಾಲಯದ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ವೈಯಕ್ತಿಕ ಕಾರಣಗಳನ್ನು ನೀಡಿ, ಗೃಹ ಸಚಿವಾಲಯದ ಸಲಹೆಗಾರನ ಹುದ್ದೆಗೆ ವಿಜಯ್ ಕುಮಾರ್ ರಾಜೀನಾಮೆ ನೀಡಿದ್ದು, ದೆಹಲಿಯಿಂದ ಚೆನ್ನೈ ಗೆ ಮರಳಿದ್ದಾರೆ. ನಾನು ಎಂಹೆಚ್ಎ ಸಲಹೆಗಾರನ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದು ವೈಯಕ್ತಿಕ ಕಾರಣಕ್ಕಾಗಿ ಚೆನ್ನೈನಲ್ಲಿದ್ದೇನೆ ಎಂದು ಪಿಟಿಐ ಗೆ ವಿಜಯ್ ಕುಮಾರ್ ಹೇಳಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಎಂಎಹೆಚ್ ನ ಇತರ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಪಡೆಗಳ ಮುಖ್ಯಸ್ಥರಿಗೆ ವಿಜಯ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರ, ಎಡಪಂಥೀಯ ತೀವ್ರವಾದದ ವಿಷಯಗಳಲ್ಲಿ ಕುಮಾರ್ ಸಲಹೆ ನೀಡುತ್ತಿದ್ದರು.
Advertisement