'ಕಾಶ್ಮೀರಿಯತ್‌' ಹೆಸರಿನಲ್ಲಿ ನಮ್ಮ ರಾಷ್ಟ್ರ ಕಂಡ ಭಯೋತ್ಪಾದನೆ, ರಕ್ತಪಾತ ವ್ಯಾಖ್ಯಾನಿಸಲು ಅಸಾಧ್ಯ: ರಾಜನಾಥ್ ಸಿಂಗ್

'ಕಾಶ್ಮೀರಿಯತ್‌'  ಹೆಸರಿನಲ್ಲಿ ರಾಷ್ಟ್ರ ಕಂಡ ಭಯೋತ್ಪಾದನೆ ಮತ್ತು ರಕ್ತಪಾತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.  
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಬುದ್ಗಾಮ್:  'ಕಾಶ್ಮೀರಿಯತ್‌'  ಹೆಸರಿನಲ್ಲಿ ರಾಷ್ಟ್ರ ಕಂಡ ಭಯೋತ್ಪಾದನೆ ಮತ್ತು ರಕ್ತಪಾತವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.  

ಜಮ್ಮು-ಕಾಶ್ಮೀರದ ಬುದ್ಗಾಮ್ ನಲ್ಲಿಂದು  ಭಾರತೀಯ ಸೇನೆಯಿಂದ ಆಯೋಜಿಸಿದ್ದ 'ಶೌರ್ಯ ದಿವಸ್ 'ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಶ್ಮೀರಿಯತ್ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಜೀವಗಳು ಕಳೆದುಹೋದವು ಮತ್ತು ಲೆಕ್ಕವಿಲ್ಲದಷ್ಟು ಮನೆಗಳು ನಾಶವಾದವು. ಅನೇಕ ಜನರು ಭಯೋತ್ಪಾದನೆಯನ್ನು ಧರ್ಮದೊಂದಿಗೆ ಜೋಡಿಸಲು ಪ್ರಯತ್ನಿಸಿದರು ಎಂದು ತಿಳಿಸಿದರು.

ಭವಿಷ್ಯದಲ್ಲಿ ಎಂತಹ ಪರಿಸ್ಥಿತಿ ಬಂದರೂ ನಮ್ಮ ಮುಂದೆ ಎಷ್ಟೇ ವಿಭಜಕ ಶಕ್ತಿಗಳು ಬಂದರೂ ಅವರದೇ ಭಾಷೆಯಲ್ಲಿ ಉತ್ತರ ನೀಡುವ ಮೂಲಕ ನಮ್ಮ ದೇಶವನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬ ಸಂಕಲ್ಪವನ್ನು ಕೈಗೊಳ್ಳಲು ಈ ಶೌರ್ಯ ದಿವಸ್  ಪ್ರೇರೇಪಿಸುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com