ನವದೆಹಲಿ: ಬಂಧನಕ್ಕೊಳಗಾಗಿರುವ ಟಿಎಂಸಿಯ ಅನುಬ್ರತಾ ಮೊಂಡಲ್ ಪುತ್ರಿ ಹಾಗೂ ಮೊಂಡಲ್ ಅವರ ಚಾರ್ಟೆಡ್ ಅಕೌಂಟೆಂಟ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ.
ವಿಚಾರಣೆಗಾಗಿ ನ.02 ರಂದು ದೆಹಲಿ ಕಚೇರಿಗೆ ಹಾಜರಾಗುವಂತೆ ನೊಟೀಸ್ ನಲ್ಲಿ ಸೂಚಿಸಲಾಗಿದೆ. ಬಂಗಾಳದಲ್ಲಿ ಅಕ್ರಮ ಗೋಸಾಗಣೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಜಾರಿ ನಿರ್ದೇಶನಾಲಯದ ಡಿಟೆಕ್ಟೀವ್ ಗಳಿಂದ ಇಬ್ಬರ ವಿಚಾರಾಣೆ ನಡೆಯುವ ಸಾಧ್ಯತೆ ಇದೆ ಎಂದು ಏಜೆನ್ಸಿ ಅಧಿಕಾರಿಗಳು ತಿಳಿಸಿದ್ದಾರೆ. ಅನುಬ್ರತಾ ಮೊಂಡಲ್ ಪುತ್ರಿ ಸುಕನ್ಯಾ ಮೊಂಡಲ್ ಎರಡು ಸಂಸ್ಥೆಗಳ ಮಾಲಿಕರಾಗಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿ ಬೃಹತ್ ಪ್ರಮಾಣದ ಸಂಪತ್ತು ಹೊಂದಿದ್ದು ಹೇಗೆ ಎಂಬುದನ್ನು ಸುಕನ್ಯಾ ಅಧಿಕಾರಿಗಳಿಗೆ ವಿವರಿಸಬೇಕಾಗುತ್ತದೆ. ಸಿಎ ಕೊಠಾರಿ ಗೂ ಎಲ್ಲಾ ದಾಖಲೆಗಳನ್ನೂ ತರುವಂತೆ ಸೂಚಿಸಲಾಗಿದೆ.
Advertisement