ಪ್ರಶ್ನೆ ಕೇಳುವುದು ಹೇಗೆ ಸಂಸತ್ ನ ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ?: ಸಂಸದ ಡ್ಯಾನಿಶ್ ಅಲಿ

49 ವಿಪಕ್ಷ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಡ್ಯಾನಿಶ್ ಅಲಿ ಪ್ರತಿಕ್ರಿಯೆ ನೀಡಿದ್ದು, ಪ್ರಶ್ನೆ ಕೇಳುವುದು ಹೇಗೆ ಸಂಸತ್ ನ ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ? ಎಂದು ಕೇಳಿದ್ದಾರೆ.
ಸಂಸದ ಡ್ಯಾನಿಶ್ ಅಲಿ
ಸಂಸದ ಡ್ಯಾನಿಶ್ ಅಲಿ

ನವದೆಹಲಿ: 49 ವಿಪಕ್ಷ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಡ್ಯಾನಿಶ್ ಅಲಿ ಪ್ರತಿಕ್ರಿಯೆ ನೀಡಿದ್ದು, ಪ್ರಶ್ನೆ ಕೇಳುವುದು ಹೇಗೆ ಸಂಸತ್ ನ ಶಿಷ್ಟಾಚಾರ ಉಲ್ಲಂಘನೆಯಾಗುತ್ತದೆ? ಎಂದು ಕೇಳಿದ್ದಾರೆ.

ಸಂಸತ್ ನ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಕ್ಕಾಗಿ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಹೇಳಿರುವುದು ವಿಚಿತ್ರವಾಗಿದೆ ಎಂದು ಸಂಸದ ಡ್ಯಾನಿಶ್ ಅಲಿ ಹೇಳಿದ್ದಾರೆ.

ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವುದು ಸಂಸದೀಯ ಸೌಹಾರ್ದತೆಯ ಉಲ್ಲಂಘನೆಗೆ ಆಪಾದನೆಗೆ ಹೇಗೆ ಅರ್ಹವಾಗುತ್ತದೆ? ಸದನದಲ್ಲಿ ನಿಂದನೆಗಳು ನಡೆದಾಗ ಯಾವುದೇ ರೀತಿಯ ಉಲ್ಲಂಘನೆಯಾಗಿಲ್ಲ, ಸಂಸದರನ್ನು ಅಮಾನತುಗೊಳಿಸಿಲ್ಲ ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ದಾಳಿಕೋರರು ಸದನಕ್ಕೆ ಪ್ರವೇಶಿಸಿದಾಗ ಬಿಜೆಪಿ ಸಂಸದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಧಾನಿ ಮತ್ತು ಗೃಹ ಸಚಿವರು ಯಾವುದೇ ಹೇಳಿಕೆ ನೀಡುವುದಿಲ್ಲ. ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವುದು ಉಲ್ಲಂಘನೆಯಾಗಿ ಅಮಾನತಿಗೆ ಅರ್ಹತೆ ಯಾವಾಗ ಆಯಿತು ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಡ್ಯಾನಿಶ್ ಅಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com