ಎನ್‌ಸಿಪಿ ಬಿಕ್ಕಟ್ಟು: ಅಜಿತ್ ಪವಾರ್ ಬದಲಿಗೆ ಎನ್‌ಸಿಪಿ ವಿರೋಧ ಪಕ್ಷದ ನಾಯಕನಾಗಿ ಜಿತೇಂದ್ರ ಅವದ್ ನೇಮಕ

ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪಕ್ಷದ ಶಾಸಕ ಜಿತೇಂದ್ರ ಅವದ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದೆ. 
ಜಿತೇಂದ್ರ ಅವದ್
ಜಿತೇಂದ್ರ ಅವದ್

ಮುಂಬೈ: ಅಜಿತ್ ಪವಾರ್ ಅವರು ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ(ಎನ್‌ಸಿಪಿ) ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪಕ್ಷದ ಶಾಸಕ ಜಿತೇಂದ್ರ ಅವದ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದೆ. 

ಎನ್‌ಸಿಪಿ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರನ್ನು ಪಕ್ಷದ ಮುಖ್ಯ ಸಚೇತಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದ್ದಾರೆ ಎಂದು ನೆರೆಯ ಥಾಣೆ ಜಿಲ್ಲೆಯ ಮುಂಬ್ರಾ-ಕಲ್ವಾ ಶಾಸಕ ಅವ್ಹಾದ್ ಹೇಳಿದ್ದಾರೆ. ಇದುವರೆಗೆ ವಿರೋಧ ಪಕ್ಷದ ನಾಯಕರಾಗಿದ್ದ ಅಜಿತ್ ಪವಾರ್ ಅವರ ಸ್ಥಾನಕ್ಕೆ ಅವ್ಹಾದ್ ನೇಮಕಗೊಳ್ಳಲಿದ್ದಾರೆ.

ಎನ್‌ಸಿಪಿ  ಬಿಕ್ಕಟ್ಟಿನ ನಂತರ ಸಂಭವನೀಯ ಪಕ್ಷಾಂತರ ಮತ್ತು ಅನರ್ಹತೆಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಶಾಸಕರು ನನ್ನ ವಿಪ್ ಅನ್ನು ಪಾಲಿಸಬೇಕಾಗುತ್ತದೆ ಎಂದು ಅವ್ಹಾದ್ ಹೇಳಿದರು. ಅವ್ಹಾದ್ ಅವರು, 'ಕಳೆದ 25 ವರ್ಷಗಳಲ್ಲಿ ಪಕ್ಷವು ತಮ್ಮನ್ನು ಸಚಿವರನ್ನಾಗಿ ಮಾಡಿದೆ ಎಂಬುದನ್ನು ಈ ನಾಯಕರು ಮರೆಯಬಾರದು. ಈಗ ಅವರು ತಮ್ಮ ನಾಯಕ ಶರದ್ ಪವಾರ್ ಅವರನ್ನು ತೊರೆಯುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com