ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ.
ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಸಂಸದ ಸಂಜಯ್ ರೌತ್ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಇಬ್ಬರೂ ಸಹೋದರರಾಗಿರುವ ಕಾರಾಣ ಅವರ ನಡುವಿನ ಹೊಂದಾಣಿಕೆಗೆ ಯಾರದ್ದೇ ಮಧ್ಯಸ್ಥಿಕೆಯೂ ಬೇಡ ಎಂದು ಹೇಳಿದ್ದ ಬೆನ್ನಲ್ಲೆ ರಾಜ್ ಠಾಕ್ರೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭೇಟಿ ಮಾಡಿದ್ದಾರೆ.
ಸಂಜಯ್ ರೌತ್ ಹೇಳಿಕೆ ಬೆನ್ನಲ್ಲೇ ರಾಜ್ ಠಾಕ್ರೆ ಸಿಎಂ ಶಿಂಧೆಯನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರಕ್ಕೆ ಎನ್ ಸಿಪಿ ಸದಸ್ಯರು ಬೆಂಬಲ ನೀಡಿ ಒಳಗೆ ಬಂದಿರುವುದಕ್ಕೆ ಶಿವಸೇನೆ (ಶಿಂಧೆ ಬಣ)ಯ ಶಾಸಕರಲ್ಲಿ ಆತಂಕ ಮೂಡಿರಬಹುದು ಹಾಗೂ ಶಿಂಧೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂಬ ವರದಿಗಳ ಬಗ್ಗೆ ಸಿಎಂ ಶಿಂಧೆ ಸ್ಪಷ್ಟನೆ ನೀಡಿ ಇವೆಲ್ಲವೂ ವದಂತಿಗಳಷ್ಟೇ ಎಂದು ಹೇಳಿದ್ದರು.
Advertisement