ಸಿಎಂ ಏಕನಾಥ್ ಶಿಂಧೆ
ಸಿಎಂ ಏಕನಾಥ್ ಶಿಂಧೆ

ಕುತೂಹಲ ಮೂಡಿಸಿದ ಮಹಾರಾಷ್ಟ್ರ ಸಿಎಂ ಶಿಂಧೆ-ಠಾಕ್ರೆ ಭೇಟಿ

ಮಹಾರಾಷ್ಟ್ರದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. 
Published on

ಮುಂಬೈ: ಮಹಾರಾಷ್ಟ್ರದಲ್ಲಿ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. 

ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಸಂಸದ ಸಂಜಯ್ ರೌತ್ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಇಬ್ಬರೂ ಸಹೋದರರಾಗಿರುವ ಕಾರಾಣ ಅವರ ನಡುವಿನ ಹೊಂದಾಣಿಕೆಗೆ ಯಾರದ್ದೇ ಮಧ್ಯಸ್ಥಿಕೆಯೂ ಬೇಡ ಎಂದು ಹೇಳಿದ್ದ ಬೆನ್ನಲ್ಲೆ ರಾಜ್ ಠಾಕ್ರೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭೇಟಿ ಮಾಡಿದ್ದಾರೆ.

ಸಂಜಯ್ ರೌತ್ ಹೇಳಿಕೆ ಬೆನ್ನಲ್ಲೇ ರಾಜ್ ಠಾಕ್ರೆ ಸಿಎಂ ಶಿಂಧೆಯನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.  ಇದಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರಕ್ಕೆ ಎನ್ ಸಿಪಿ ಸದಸ್ಯರು ಬೆಂಬಲ ನೀಡಿ ಒಳಗೆ ಬಂದಿರುವುದಕ್ಕೆ ಶಿವಸೇನೆ (ಶಿಂಧೆ ಬಣ)ಯ ಶಾಸಕರಲ್ಲಿ ಆತಂಕ ಮೂಡಿರಬಹುದು ಹಾಗೂ ಶಿಂಧೆ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂಬ ವರದಿಗಳ ಬಗ್ಗೆ ಸಿಎಂ ಶಿಂಧೆ ಸ್ಪಷ್ಟನೆ ನೀಡಿ ಇವೆಲ್ಲವೂ ವದಂತಿಗಳಷ್ಟೇ ಎಂದು ಹೇಳಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com