ಭೋಪಾಲ್: ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರ ಮೊಬೈಲ್ ಫೋನ್ ನ್ನು ವಂಚಕರು ಹ್ಯಾಕ್ ಮಾಡಿದ್ದು, ಪಕ್ಷದ ನಾಲ್ಕು ನಾಯಕರಿಗೆ ಕರೆ ಮಾಡಿ ಅವರಿಂದ ತಲಾ 10 ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಸ್ವತಃ ಪಕ್ಷದ ವಕ್ತಾರರೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಕರೆ ಮಾಡಿ, ಮಾಲ್ವಿಯಾ ನಗರಕ್ಕೆ ಹಣ ಪಡೆಯಲು ಬಂದಿದ್ದ ಇಬ್ಬರನ್ನು ಕಾಂಗ್ರೆಸ್ ನ ಪದಾಧಿಕಾರಿಗಳು ಹಿಡಿದಿದ್ದಾರೆ, ಒಬ್ಬರೂ ಸಹ ಗುಜರಾತ್ ಮೂಲದವರೆಂದು ತಿಳಿದುಬಂದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
ಮಧ್ಯಪ್ರದೇಶದ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಕೆಕೆ ಮಿಶ್ರಾ ಈ ಬಗ್ಗೆ ಪಿಟಿಐ ಗೆ ಮಾಹಿತಿ ನೀಡಿದ್ದು, ಆರೋಪಿ ಕಮಲ್ ನಾಥ್ ಅವರ ಫೋನ್ ನ್ನು ಹ್ಯಾಕ್ ಮಾಡಿ, ಆ ಮೂಲಕ ಎಂಎಲ್ಎ ಸತೀಶ್ ಸಿಕರ್ವಾರ್, ಖಜಾಂಚಿ ಅಶೋಕ್ ಸಿಂಗ್, ಇಂದೋರ್ ಸಿಟಿ ಕಾಂಗ್ರೆಸ್ ಅಧ್ಯಕ್ಷ ಸುರ್ಜಿತ್ ಸಿಂಗ್ ಚಡ್ಡಾ ಹಾಗೂ ಮಾಜಿ ಖಜಾಂಚಿ ಗೋವಿಂದ್ ಗೋಯಲ್ ಅವರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅನುಮಾನಗೊಂಡ ಗೋಯಲ್, ವಿವರಗಳನ್ನು ಪದಾಧಿಕಾರಿಗಳಲ್ಲಿ ಪರಿಶೀಲಿಸಿದಾಗ ಈ ವಂಚನೆಯ ಕೃತ್ಯ ಬೆಳಕಿಗೆ ಬಂದಿದೆ.
Advertisement