ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ನಾಳೆಯೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಯೆಲ್ಲೂ ಆಲರ್ಟ್ ಘೋಷಿಸಿದೆ.
ಲಕ್ಷ್ಮೀನಗರ, ಅಯನಗರ, ಲೊದಿ ರಸ್ತೆ, ಮುಂಗೇಶ್ಪರ್ ಮತ್ತಿತರ ಕಡೆಗಳಲ್ಲಿ ಶುಕ್ರವಾರ ಹಗುರ ಮಳೆಯಾಗಿದೆ. ಲುಟಿಯನ್ಸ್ನ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಪ್ರದೇಶಗಳಲ್ಲಿ ಲಘು ಪ್ರಮಾಣದ ತುಂತುರು ಮಳೆಯಾಗಿದೆ.
ನಾಳೆ ದೆಹಲಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದ್ದು,ಮುನ್ಸೂಚನೆಯಂತೆ ಯೆಲ್ಲೂ ಅಲರ್ಟ್ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಮಳೆ ಪ್ರಮಾಣ ತಿಳಿಸಲು ಭಾರತೀಯ ಹವಾಮಾನ ಇಲಾಖೆ ಬಣ್ಣದ ಕೋಡ್ ಬಳಸುತ್ತದೆ. ಗ್ರೀನ್ ಆಲರ್ಟ್ ಎಂದರೆ ಎಲ್ಲವೂ ಚೆನ್ನಾಗಿದೆ ಎಂಬರ್ಥ ಆದರೆ ಯೆಲ್ಲೂ ಆಲರ್ಟ್ ಎಂದು ತೀವ್ರ ಕೆಟ್ಟ ಹವಾಮಾನವನ್ನು ಸೂಚಿಸುತ್ತದೆ.
ಯೆಲ್ಲೂ ಆಲರ್ಟ್ ಹವಾಮಾನವು ಕೆಟ್ಟದಾಗಿ ಬದಲಾಗಿ,ದೈನಂದಿನ ಚಟುವಟಿಕೆಗಳನ್ನು ಅಡ್ಡಿಪಡಿಸುತ್ತದೆ ಎಂದು ಅದು ಸೂಚಿಸುತ್ತದೆ. ರಸ್ತೆ ಮತ್ತು ಚರಂಡಿ ಬಂದ್, ವಿದ್ಯುತ್ ಸರಬರಾಜಿನ ಅಡಚಣೆಯೊಂದಿಗೆ ಅತ್ಯಂತ ಕೆಟ್ಟ ಹವಾಮಾನದ ಎಚ್ಚರಿಕೆಯಾಗಿ ಈ ರೀತಿಯ ಮುನ್ಸೂಚನೆ ನೀಡಲಾಗುತ್ತದೆ. ಹವಾಮಾನವು ಜೀವಕ್ಕೆ ಗಮನಾರ್ಹ ಅಪಾಯವನ್ನುಂಟು ಮಾಡಿದಾಗ 'ರೆಡ್ ಆಲರ್ಟ್' ನೀಡಲಾಗುತ್ತದೆ.
Advertisement