ಟಿಎಂಸಿಯಲ್ಲಿದ್ದ ಪತ್ನಿಗೆ ಚುನಾವಣೆಯಲ್ಲಿ ಸೋಲು; ಬಿಜೆಪಿಯಲ್ಲಿದ್ದ ತಂದೆಯನ್ನೆ ಹತ್ಯೆ ಮಾಡಿದ ಯುವಕ?!

ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದಕ್ಕಾಗಿ ಬಿಜೆಪಿಯಲ್ಲಿದ್ದ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 
ಹತ್ಯೆ (ಸಾಂಕೇತಿಕ ಚಿತ್ರ)
ಹತ್ಯೆ (ಸಾಂಕೇತಿಕ ಚಿತ್ರ)
Updated on

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕುಟುಂಬದಲ್ಲಿ ರಾಜಕೀಯ ವೈಷಮ್ಯ ತಲೆದೋರಿದ್ದು,  ಯುವಕನೋರ್ವ, ಟಿಎಂಸಿಯಲ್ಲಿದ್ದ ತನ್ನ ಪತ್ನಿಗೆ, ಇತ್ತೀಚಿನ ಪಂಚಾಯತ್ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದಕ್ಕಾಗಿ ಬಿಜೆಪಿಯಲ್ಲಿದ್ದ ತನ್ನ ತಂದೆಯನ್ನೇ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. 

ಮಾಲ್ಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿಯಲ್ಲಿ ಯುವಕನ ತಂದೆ ಸಕ್ರಿಯರಾಗಿದ್ದರು. ಆದರೆ ಟಿಎಂಸಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಯುವಕನ ಪತ್ನಿ ಬಿಜೆಪಿಯ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು. 

52 ವರ್ಷದ ಬುರಾನ್ ಮುರ್ಮು (ಬಿಜೆಪಿ ಕಾರ್ಯಕರ್ತ) ತನ್ನ ಪುತ್ರ ಬಿಪ್ಲಬ್ ಮುರ್ಮು ಹಾಗೂ ಸೊಸೆ ಶರ್ಮಿಳಾ ಮುರ್ಮು ಅವರೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಬುರಾನ್ ಮುರ್ಮು ಅವರ ಮೃತ ದೇಹ- ಹಲವು ಗಾಯಗಳೊಂದಿಗೆ ಅವರ ಕೊಠಡಿಯಲ್ಲಿ ಸೀಲಿಂಗ್ ಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.  ಈ ಘಟನೆ ಗ್ರಾಮದಲ್ಲಿ ಕೋಲಾಹಲ ಸೃಷ್ಟಿಸಿದ್ದು, ಟಿಎಂಸಿ ನಾಯಕರೇ ಈ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com